HEALTH TIPS

No title

               ಕಲೆ ಕ್ರಿಯಾತ್ಮಕತೆ ಪಡೆದಾಗ ಜನರಿಗೆ ತಲುಪುತ್ತದೆ : ಡಾ.ಬಿ.ಎ.ವಿವೇಕ ರೈ
     ಕಾಸರಗೋಡು: ಸಾಹಿತ್ಯ, ಕಲೆ ಮತ್ತು ಸಾಂಸ್ಕೃತಿಕ ಆಯಾಮಗಳು ಕ್ರಿಯಾತ್ಮಕವಾಗುತ್ತದೋ ಆವಾಗ ಅದು ಜನಪ್ರಿಯವಾಗುತ್ತಾ ಜನರನ್ನು ತಲುಪುತ್ತದೆ. ಅಂತಹ ವಾತಾವರಣ ಕಾಸರಗೋಡಿನಲ್ಲಿದೆ. ಬಹುಭಾಷಾ ಪ್ರದೇಶವಾಗಿರುವುದರಿಂದ ಇಲ್ಲಿ ಬಹುರೂಪದ ರಂಗಭೂಮಿ ಕಟ್ಟಲು ಮತ್ತು ರಂಗ ಚಳವಳಿಗೆ ಸಾಧ್ಯವಾಗುತ್ತದೆ ಎಂದು ಹಂಪಿ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಡಾ.ಬಿ.ಎ.ವಿವೇಕ ರೈ ಅವರು ಹೇಳಿದರು.
    ಅವರು ಕಾಸರಗೋಡಿನ ಸಾಮಾಜಿಕ, ಸಾಂಸ್ಕೃತಿಕ ಸಂಘಟನೆಯಾದ `ರಂಗಚಿನ್ನಾರಿ ಕಾಸರಗೋಡು' ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಕಾಸರಗೋಡು ನಗರಸಭಾ ಸಭಾಂಗಣದಲ್ಲಿ ಹಮ್ಮಿಕೊಂಡ ಹನ್ನೆರಡನೇ ವಾಷರ್ಿಕೋತ್ಸವ-ಪ್ರಶಸ್ತಿ ಪ್ರದಾನ ಸಮಾರಂಭದ ಭಾನುವಾರ ಸಂಜೆ ನಡೆದ ಸಮಾರೋಪದಲ್ಲಿ ಮಾತನಾಡಿದರು. 
        ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಮತ್ತು ಯಕ್ಷಗಾನದ ಆಚಾರ್ಯ ಪಾತರ್ಿಸುಬ್ಬ ಕಾಸರಗೋಡಿನ ಅನನ್ಯತೆಯ ಎರಡು ರೂಪಕಗಳು ಎಂದು ಅಭಿಪ್ರಾಯಪಟ್ಟ ಅವರು ಯಕ್ಷಗಾನ ಕಲೆಯಿಂದಾಗಿ ಕಾಸರಗೋಡಿನಲ್ಲಿ ಕನ್ನಡದ ಕಂಪು ಇಂದೂ ಉಳಿದುಕೊಂಡಿದೆ. ಯಕ್ಷಗಾನ ಕ್ರಿಯಾತ್ಮಕವಾಗಿದ್ದು, ದಿನದಿಂದ ದಿನಕ್ಕೆ ಹೊಸತನ್ನು ಕಾಣಲು ಸಾಧ್ಯವಾಗುತ್ತದೆ. ಕಾಸರಗೋಡಿನಲ್ಲಿ ರಂಗಭೂಮಿ ವಿಸ್ತಾರವಾದುದು. ಕಾಸರಗೋಡಿನ ಸಾಂಸ್ಕೃತಿಕ ಸಂಘಟನೆಗಳು ನಿರಂತರ ಚಟುವಟಿಕೆಯ ಮೂಲಕ ಕನ್ನಡವನ್ನು ಉಳಿಸುವ ಪ್ರಯತ್ನವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
   ಅಭಿನಂದನಾ ಭಾಷಣ ಮಾಡಿದ ನಾಟಕಕಾರ ಶಶಿರಾಜ್ ಕಾವೂರು ಮಕ್ಕಳನ್ನು ಕಲೆ, ಸಾಹಿತ್ಯ, ಕ್ರೀಡೆ ಹೀಗೆ ವಿವಿಧ ಕ್ಷೇತ್ರಗಳಿಗೆ ಕರೆತರುವ ಮೂಲಕ ಅವರನ್ನು ಸತ್ಪ್ರಜೆಯನ್ನಾಗಿ ಬೆಳೆಸಬಹುದು. ಹಿರಿಯರೊಂದಿಗೆ ಕಿರಿಯರಿಗೆ ಪ್ರಶಸ್ತಿಯ ಗೌರವ ನೀಡುವುದು ಶ್ಲಾಘನೀಯ. ಈ ಮೂಲಕ ಯುವ ಪ್ರತಿಭೆಗಳಿಗೆ ಬೆಳೆಯಲು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.
   ಕಾರ್ಯಕ್ರಮದಲ್ಲಿ ಹಿರಿಯ ಕವಿ, ಸಾಹಿತಿ, ಯಕ್ಷಗಾನ ಅರ್ಥದಾರಿ ಡಾ.ರಮಾನಂದ ಬನಾರಿ, ಚಿತ್ರ ನಟ, ನಿದೇರ್ಶಕ ಶಿವಧ್ವಜ್, ಯುವ ಪ್ರತಿಭೆಗಳಾದ ಪ್ರಶಸ್ತಿ ವಿಜೇತ ಗಾಯಕಿ ಶಿವರಂಜಿನಿ ಐ.ಭಟ್, ಖ್ಯಾತ ನೃತ್ಯಪಟು ಸಾತ್ವಿಕ್ರಾಜ್ ಪಟ್ಟಾಜೆ ಅವರನ್ನು `ರಂಗಚಿನ್ನಾರಿ ಪ್ರಶಸ್ತಿ' ನೀಡಿ ಗೌರವಿಸಲಾಯಿತು.
   ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ರಮಾನಂದ ಬನಾರಿ ಅವರು ಕಾಸರಗೋಡು ಪುಣ್ಯ ಭೂಮಿ ಮತ್ತು ಕರ್ಮಭೂಮಿ. ಇದು ಸರ್ವ ಸಮೃದ್ಧವಾದ ಸಂಸ್ಕೃತಿಯ ನೆಲ ಎಂದರು. ಚಿತ್ರ ನಟ ಶಿವಧ್ವಜ್ ಮಾತನಾಡಿ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದರ ಮೂಲಕ ಕಾಸರಗೋಡಿನಲ್ಲಿ ಕನ್ನಡತನವನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ. ಕಾಸರಗೋಡು ಚಿನ್ನಾ ಮತ್ತು ಅವರ ಬಳಗ ನಮ್ಮ ತನವನ್ನು ಉಳಿಸಿಕೊಳ್ಳಲು ನಿರಂತರವಾಗಿ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಮಕ್ಕಳ ಸಾಂಸ್ಕೃತಿಕ ಕಲರವ ಕೇಳಿಸುವಂತಾಗಿದೆ ಎಂದರು. ಯವ ಪ್ರತಿಭೆ ಸಾತ್ವಿಕ್ ರಾಜ್ ಪಟ್ಟಾಜೆ ತನಗಿತ್ತ ಪ್ರಶಸ್ತಿಗಾಗಿ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಹಿಂದಿ ಚಿತ್ರರಂಗದ ನಿದರ್ೇಶಕ, ನಿಮರ್ಾಪಕ, ಸಾಹಸ ನಿದೇರ್ಶಕ ರಾಮ್ ಶೆಟ್ಟಿ, ರಂಗಚಿನ್ನಾರಿ ನಿದರ್ೇಶಕರಾದ ಕೋಳಾರು ಸತೀಶ್ಚಂದ್ರ ಭಂಡಾರಿ, ಕೆ.ಸತ್ಯನಾರಾಯಣ, ಮನೋಹರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ರಂಗಚಿನ್ನಾರಿ ನಿದರ್ೇಶಕ ಕಾಸರಗೋಡು ಚಿನ್ನಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
   ಸಮಾರೋಪ ಸಮಾರಂಭಕ್ಕೆ ಮುನ್ನ ದಾಸ ಸಂಕೀರ್ತನೆ ಕಾರ್ಯಕ್ರಮವನ್ನು ಶ್ರೀ ಕೃಷ್ಣಾನುಗ್ರಹ ಪುರಸ್ಕೃತ ಜಯಾನಂದ ಕುಮಾರ್ ಹೊಸದುರ್ಗ ಅವರು ದೀಪ ಪ್ರಜ್ವಲನೆಗೊಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆ ಬಳಿಕ ವಾಮಂಜೂರು ಶ್ರೀ ಶಾಸ್ತಾವೇಶ್ವರ ಮಹಿಳಾ ಭಜನಾ ಮಂಡಳಿ, ಮುಳ್ಳೇರಿಯಾ ಹರಿಪ್ರಿಯ ಮಹಿಳಾ ಭಜನಾ ಮಂಡಳಿ, ಅಡೂರು ಶ್ರೀ ಪ್ರಿಯ ಮಹಿಳಾ ಭಜನಾ ಮಂಡಳಿ, ಆರಿಕ್ಕಾಡಿ ಶ್ರೀ ಹನುಮ ಭಕ್ತ ಭಜನಾ ಸಂಘದಿಂದ ಸಂಕೀರ್ತನೆ ನಡೆಯಿತು.
   ಯುವ ಪ್ರತಿಭೆಗಳಾದ ಅಸಾವರಿ, ರಚನಾ ಮತ್ತು ಶ್ರಾವ್ಯ ಅವರಿಂದ ಕಥಕ್ ನೃತ್ಯ, ಶಂಕರ್ ಶ್ಯಾನುಭೋಗ್ ಅವರಿಂದ ಭಾವ ಸಿಂಚನ ಕಾರ್ಯಕ್ರಮ ನಡೆಯಿತು. ತಬಲಾದಲ್ಲಿ ರಾಜೇಶ್ ಭಾಗವತ್, ಹಾಮರ್ೋನಿಯಂನಲ್ಲಿ ಸತ್ಯನಾರಾಯಣ ಐಲ ಸಹಕರಿಸಿದರು. 
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries