HEALTH TIPS

No title

2019 ರ ವಿಶ್ವಜಿತ್ ಅತಿರಾತ್ರ ಸೋಮಯಾಗದ 'ವಕರ್ಾಡಿ ಪಂಚಾಯತಿ' ಸಮಿತಿ ರೂಪೀಕರಣ
   ಮಂಜೇಶ್ವರ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ 2019 ರ ಫೆಬ್ರವರಿ 18 ರಿಂದ 24 ರ ವರೆಗೆ ಅತ್ಯಪೂರ್ವವೂ, ಅತಿ ವಿಶಿಷ್ಟವೂ ಆದ ವಿಶ್ವಜಿತ್ ಅತಿರಾತ್ರ ಸೋಮಯಾಗವು ಧಮರ್ಾಭಿಮಾನಿಗಳ ಸಹಕಾರದಿಂದ ನಡೆಯಲಿದೆ. ಈ ಯಾಗದ ಯಶಸ್ಸಿಗೆ ವಿವಿಧ ಪಂಚಾಯತುಗಳಲ್ಲಿ ಸಮಿತಿಗಳನ್ನು ರಚಿಸಲಾಗುತ್ತಿದ್ದು, ವಕರ್ಾಡಿ ಪಂಚಾಯತಿ ಸಮಿತಿ ರೂಪೀಕರಣ ಸಭೆ ಇತ್ತೀಚೆಗೆ ಸುಂಕದಕಟ್ಟೆಯಲ್ಲಿ ನಡೆಯಿತು.
   ಸಮಿತಿಯ ಗೌರವಾಧ್ಯಕ್ಷರನ್ನಾಗಿ  ಶ್ಯಾಮ್ ವಿಠಲ್, ಅಧ್ಯಕ್ಷರನ್ನಾಗಿ ರವಿ ಮುಡಿಮಾರು, ಕಾಯರ್ಾಧ್ಯಕ್ಷರನ್ನಾಗಿ ಆನಂದ ಟಿ ತಚ್ಚಿರೆ,ಉಪಾಧ್ಯಕ್ಷರುಗಳಾಗಿ ಸತ್ಯನಾರಾಯಣ ಭಟ್ ದೈಗೋಳಿ, ಸದಾಶಿವ ಯು ವಕರ್ಾಡಿ, ಐತಪ್ಪ ಶೆಟ್ಟಿ ದೇವಂದಪಡ್ಪು, ಸಂತೋಷ್ ದೈಗೋಳಿ, ಸೋಮಶೇಖರ ಬಾಕ್ರಬೈಲು, ಭಾ.ವಿ.ಸುರೇಶ, ವಿವೇಕಾನಂದ ಶೆಟ್ಟಿ  ಪ್ರಧಾನ ಕಾರ್ಯದಶರ್ಿಗಳಾಗಿ ಮಹೇಶ್ ಕೆ.ವಿ., ಜೊತೆಕಾರ್ಯದಶರ್ಿಗಳಾಗಿ ನಾಗೇಶ್ ಬಳ್ಳೂರು, ಪ್ರಜ್ವಿತ್ ಶೆಟ್ಟಿ, ರಾಜ್ಕುಮಾರ್ ಶೆಟ್ಟಿ,  ಕೃಷ್ಣಪ್ಪ ವಕರ್ಾಡಿ, ಸುರೇಂದ್ರ ನಲ್ಲೆಂಗ ಮತ್ತು ಕೋಶಾಧಿಕಾರಿಗಳಾಗಿ ವಿನೋದ್ ಕುಮಾರ್ ಪಾವೂರು ಇವರುಗಳನ್ನು ಆರಿಸಲಾಯಿತು. ಯಾಗದ ಪ್ರಾಮುಖ್ಯತೆ,  ಯಾಗನಿಧಿ ಸಂಗ್ರಹ ದಷ್ಟಿಯಿಂದ ಕನಿಷ್ಟ 7000 "ಹುಂಡಿ" ವಿತರಿಸುವುದು, ವಿಷ್ಣುಸಹಸ್ರನಾಮ ಅಭಿಯಾನ, ಸಹಸ್ರ ವೃಕ್ಷಸಮೃದ್ಧಿ ಅಭಿಯಾನ ಇತ್ಯಾದಿಗಳ ಕುರಿತು  ವೇದಿಕೆಯಲ್ಲಿ ಉಪಸ್ಥಿತರಿದ್ದ ವಕರ್ಾಡಿ ಗ್ರಾಮ ಪಂಚಾಯತು ಸದಸ್ಯ ಆನಂದ ಶೆಟ್ಟಿ , ಸುರೇಶ್ ಪರಂಕಿಲ, ಪುಷ್ಪರಾಜ್ ಐಲ, ಗಂಗಾಧರ್ ಕೊಂಡೆವೂರು, ದಿನಕರ ಹೊಸಂಗಡಿ, ಕಿಶೋರ್ ಭಗವತಿ ಮಾಹಿತಿ ನೀಡಿದರಲ್ಲದೆ, ಯಾಗದ ಕೆಲಸಕಾರ್ಯಗಳಲ್ಲಿ ಈಗಿನಿಂದಲೇ ತೊಡಗಿಸಿಕೊಂಡು ಯಶಸ್ವಿಗೊಳಿಸುವಂತೆ ಕರೆ ನೀಡಿದರು. ರವಿ ಮುಡಿಮಾರ್ ಸ್ವಾಗತಿಸಿ, ಮಹೇಶ್ ಕೆ.ವಿ. ವಂದಿಸಿದರು. ಆನಂದ ಟಿ. ನಿರೂಪಿಸಿದರು. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries