HEALTH TIPS

No title

   ಕಿಡ್ನಿವೈಫಲ್ಯದಿಂದ ಬಳಲುತ್ತಿರುವ ರಾಮನಾಯ್ಕರಿಗೆ ನಿವೇದಿತಾ ಸೇವಾ ಮಿಶನ್ನ ಧನಸಹಾಯ ಹಸ್ತಾಂತರ
    ಬದಿಯಡ್ಕ: ಕಿಡ್ನಿವೈಫಲ್ಯದಿಂದ ಬಳಲುತ್ತಿರುವ ನೀಚರ್ಾಲು ಸಮೀಪದ ಪುದುಕೋಳಿ ನಿವಾಸಿ ರಾಮನಾಯ್ಕರಿಗೆ ನಿವೇದಿತಾ ಸೇವಾ ಮಿಶನ್ನ ವತಿಯಿಂದ ಮೊದಲ ಕಂತು 25,000 ರೂ.ವನ್ನು ಶುಕ್ರವಾರ ಹಸ್ತಾಂತರಿಸಲಾಯಿತು.
    ಬದಿಯಡ್ಕ ಗ್ರಾಮಪಂಚಾಯತಿ ಅಧ್ಯಕ್ಷ ಹಾಗೂ ನಿವೇದಿತಾ ಸೇವಾಮಿಶನ್ನ ಗೌರವಾಧ್ಯಕ್ಷ ಕೆ.ಎನ್. ಕೃಷ್ಣ ಭಟ್ ಧನಸಹಾಯದ ಚೆಕ್ ಅನ್ನು ಶುಕ್ರವಾರ ವಿತರಿಸಿದರು. ಪುದುಕೋಳಿ ರಾಮನಾಯ್ಕರ ಸಹಾಯಕ್ಕಾಗಿ ನಿವೇದಿತಾ ಸೇವಾ ಮಿಶನ್ ವತಿಯಿಂದ ಧನಸಂಗ್ರಹ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಧನಸಂಗ್ರಹ ಅಭಿಯಾನಕ್ಕೆ ಬದಿಯಡ್ಕ ತಿಮ್ಮಪ್ಪ ಚೆಟ್ಟಿಯಾರ್ರ ಮಗ ವಿದೇಶದಲ್ಲಿ ಉದ್ಯೋಗದಲ್ಲಿರುವ ಕಮಲಾಕ್ಷ ಹಾಗೂ ಇತರ ದಾನಿಗಳು ಮಾನವೀಯ ನೆಲೆಯಲ್ಲಿ ಧನಸಹಾಯವನ್ನು ನೀಡಿದ್ದರು. ನೀಚರ್ಾಲು ವ್ಯಾಪ್ತಿಯಲ್ಲಿ ಕಾಯರ್ಾಚರಿಸುತ್ತಿರುವ ನಿವೇದಿತಾ ಸೇವಾ ಮಿಶನ್ ಬಡ ಜನರ ತುತರ್ು ನೆರವಿಗಾಗಿ ರೂಪೀಕೃತಗೊಂಡ ಸಂಸ್ಥೆಯಾಗಿದೆ.
   ಧನಸಹಾಯ ಹಸ್ತಾಂತರದ ಸಂದರ್ಭದಲ್ಲಿ ಸೇವಾಮಿಶನ್ನ ಅಧ್ಯಕ್ಷ ಜಯದೇವ ಖಂಡಿಗೆ, ಕೋಶಾಧಿಕಾರಿ ಪುದುಕೋಳಿ ಶ್ರೀಕೃಷ್ಣ ಭಟ್, ಬಾಲಸುಬ್ರಹ್ಮಣ್ಯ ಭಟ್ ಮಲ್ಲಡ್ಕ, ಪದ್ಮನಾಭ ಪುದುಕೋಳಿ, ಗೋಪಾಲಕೃಷ್ಣ ಭಟ್ ಚುಳ್ಳಿಕ್ಕಾನ, ಮಧುಚಂದ್ರ ಮಾನ್ಯ, ಅಬ್ದುಲ್ಲ ಪುದುಕೋಳಿ ಹಾಗೂ ಸೇವಾಮಿಶನ್ನ ಕಾರ್ಯಕರ್ತರು ಜೊತೆಗಿದ್ದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries