HEALTH TIPS

No title

          ಸುಪ್ರೀಂ ಹೇಳಿದ್ದೇನು?ಎಲ್ಲ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ದೇಗುಲ ಪ್ರವೇಶ
    ಹೊಸದಿಲ್ಲಿ: ಶಬರಿಮಲೆ ದೇವಸ್ಥಾನಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶದ ಅವಕಾಶವನ್ನು ಸುಪ್ರೀಂ ಕೋಟರ್್ ನೀಡಿದೆ. ಮುಖ್ಯ ನ್ಯಾಯಮೂತರ್ಿ ಜಸ್ಟಿಸ್ ದೀಪಕ್ ಮಿಶ್ರಾ ತೀರ್ಪನ್ನು ಓದುತ್ತ, ಭಕ್ತಿಯ ವಿಚಾರದಲ್ಲಿ ಲಿಂಗ ತಾರತಮ್ಯ ಸಲ್ಲದು ಎಂದು ಹೇಳಿದರು. ತೀಪರ್ಿನ ಮುಖ್ಯಾಂಶಗಳು ಇಲ್ಲಿವೆ:
    ಪೂಜೆಯ ಹಕ್ಕು ಎಲ್ಲ ಭಕ್ತರಿಗೂ ಇದೆ. ಅದರಲ್ಲಿ ಲಿಂಗಾಧಾರಿತ ತಾರತಮ್ಯ ಸಲ್ಲದು.
    10ರಿಂದ 50ರ ವಯೋಮಾನದ ಮಹಿಳೆಯರಿಗೆ ದೇವಳ ಪ್ರವೇಶ ನಿಷೇಧಿಸುವುದು ಸಾಂವಿಧಾನಿಕ ತತ್ವಗಳ ಉಲ್ಲಂಘನೆಯಾಗುತ್ತದೆ.
    10ರಿಂದ 50ರ ವಯೋಮಾನದ ಮಹಿಳೆಯರಿಗೆ ಪ್ರವೇಶ ನಿಷೇಧಿಸುವ ಶಬರಿಮಲೆ ದೇವಸ್ಥಾನದ ಸಂಪ್ರದಾಯಕ್ಕೆ ಸಂವಿಧಾನದ 26ನೇ ವಿಧಿಯ ಬೆಂಬಲವಿಲ್ಲ ಎಂದು ನ್ಯಾಯಮೂತರ್ಿ ನಾರಿಮನ್ ವಾದಿಸಿದರು.
    ಭಕ್ತಿ ಮತ್ತು ಆರಾಧನೆ ಎಂಬುದು ಲಿಂಗ ತಾರತಮ್ಯಕ್ಕೆ ಒಳಪಡುವಂಥದ್ದಲ್ಲ ಎಂದು ಸಿಜೆಐ ಮಿಶ್ರಾ ಮತ್ತು ಎ.ಎಂ ಖಾನ್ವಿಲ್ಕರ್ ಹೇಳಿದರು.
    ಭಕ್ತಿಯಲ್ಲಿ ಸಮಾನತೆ ವಿಚಾರದಲ್ಲಿ ಪಿತೃಪ್ರಧಾನ ಕಲ್ಪನೆಗೆ ಜಾಗವಿಲ್ಲ.
    ಧರ್ಮ ಎಂಬುದು ದೇವತ್ವದ ಜತೆಗೆ ಬದುಕುವ ಒಂದು ಮಾರ್ಗವಾಗಿದೆ ಎಂದು ಸಿಜೆಐ ಮಿಶ್ರಾ ನುಡಿದರು.
    ದೈಹಿಕ ನಿರ್ಬಂಧಗಳ ಮೂಲಕ ಮಹಿಳಾ ಹಕ್ಕುಗಳನ್ನು ಕಸಿಯಲು ಅವಕಾಶವಿಲ್ಲ.
    ಸ್ವಾಮಿ ಅಯ್ಯಪ್ಪನ ಭಕ್ತರು ಪ್ರತ್ಯೇಕ ಗುಂಪಾಗಿ ಪರಿಗಣಿತವಾಗುವುದಿಲ್ಲ. ಅವರೆಲ್ಲರೂ ಹಿಂದೂಗಳು.
    ಶಬರಿಮಲೆ ದೇವಸ್ಥಾನದಲ್ಲಿ ಹಾಕಲಾದ ನಿರ್ಬಂಧಗಳು ಧಾಮರ್ಿಕ ಆಚರಣೆಯಲ್ಲಿ ಇರಲೇಬೇಕಾದ್ದೇನೂ ಅಲ್ಲ.
    ಮಹಿಳೆಯರ ದೈಹಿಕ ವ್ಯತ್ಯಾಸಗಳನ್ನು ಆಧರಿಸಿ ಅವರ ಘನತೆಯನ್ನು ಉಲ್ಲಂಘಿಸುವ ಸಂಪ್ರದಾಯ ಅಥವಾ ಧಮರ್ಾಚರಣೆ ಅಸಾಂವಿಧಾನಿಕ. ಮಹಿಳೆಯರು 'ದೇವರ ಮಲತಾಯಿ ಮಕ್ಕಳು' (ಛಿಟಜಡಿಜಟಿ ಠಜಿ ಟಜಜಡಿ ರಠಜ) ಎಂಬಂತೆ ನಡೆಸಿಕೊಳ್ಳುವುದು ಅಸಾಂವಿಧಾನಿಕ ಎಂದು ಜಸ್ಟಿಸ್ ಚಂದ್ರಚೂಡ್ ಹೇಳಿದರು.
    ಮಹಿಳೆ ಮುಟ್ಟಾಗುತ್ತಾಳೆ ಎಂಬ ಕಾರಣಕ್ಕೆ ಹೊರಗಿಡುವುದು ಸಂಪೂರ್ಣ ಅಸಾಂವಿಧಾನಿಕ ಎಂದು ಚಂದ್ರಚೂಡ್ ನುಡಿದರು.
    ಮಹಿಳೆಯರನ್ನು ಕೀಳಾಗಿ ಕಾಣುವ ಯಾವುದೇ ಧಾಮರ್ಿಕ ಸಂಪ್ರದಾಯಗಳಿಗೆ ಕೋಟರ್್ ಮಾನ್ಯತೆ ನೀಡಬಾರದು ಎಂದು ಚಂದ್ರಚೂಡ್ ಪ್ರತಿಪಾದಿಸಿದರು.
    ಸಿಜೆಐ ದೀಪಕ್ ಮಿಶ್ರಾ, ಜಸ್ಟಿಸ್ ಆರ್.ಎಫ್ ನಾರಿಮನ್, ಎ.ಎಂ ಖಾನ್ವಿಲ್ಕರ್, ಡಿವೈ ಚಂದ್ರಚೂಡ್ ಏಕರೂಪದ ತೀಪರ್ು ನೀಡಿದರೆ, ಜಸ್ಟಿಸ್ ಇಂದೂ ಮಲ್ಹೋತ್ರಾ ಅವರು ಶಬರಿಮಲೆ ವಿಚಾರದಲ್ಲಿ ಭಿನ್ನ ನಿಲುವು ತಳೆದರು.
    ಪ್ರಸ್ತುತ ತೀಪರ್ು ಶಬರಿಮಲೆಗಷ್ಟೇ ಸೀಮಿತವಲ್ಲ, ಅದಕ್ಕೂ ಮೀರಿದ ವ್ಯಾಪಕ ಪರಿಣಾಮಗಳನ್ನು ಉಂಟುಮಾಡಲಿದೆ ಎಂದು ಜಸ್ಟಿಸ್ ಇಂದೂ ಮಲ್ಹೋತ್ರಾ ನುಡಿದರು.
    ಈ ವಿವಾದ ಧಾಮರ್ಿಕತೆಯ ಆಳವನ್ನೇ ಪ್ರಶ್ನಿಸಿದೆ. ದೇಶದ ಜಾತ್ಯತೀತ ವಾತಾವರಣದ ಪಾಲನೆಗಾಗಿ ಆಳವಾಗಿ ಬೇರೂರಿದ ಧಾಮರ್ಿಕ ಆಚರಣೆಗಳನ್ನು ಹಾಳುಗೆಡವಬಾರದು ಎಂದು ಜಸ್ಟಿಸ್ ಮಲ್ಹೋತ್ರಾ ತಿಳಿಸಿದರು.
    ಕೆಲವರು ಹೇಳುವ ಪ್ರಕಾರ ಸಮಾನತೆಯ ಹಕ್ಕು ಧಾಮರ್ಿಕ ಆಚರಣೆ ಹಾಗೂ ಮೂಲಭೂತ ಹಕ್ಕಿನ ಜತೆಗೂ ಸಂಘರ್ಷಕ್ಕಿಳಿಯುತ್ತದೆ.
    ಶಬರಿಮಲೆ ದೇವಸ್ಥಾನದ ಭಕ್ತರು ಪ್ರತ್ಯೇಕ ಧಾಮರ್ಿಕ ಪಂಥ ಅನುಸರಿಸುವ ಗುಂಪಾಗಿ ಪರಿಗಣಿಸಲ್ಪಡುತ್ತಾರೆ. ಕೆಲವು ನಿದರ್ಿಷ್ಟ ವ್ರತಾಚರಣೆಗಳೊಂದಿಗೆ ಅವರು ದೇವಳ ಪ್ರವೇಶಿಸುತ್ತಾರೆ ಎಂದು ಜಸ್ಟಿಸ್ ಮಲ್ಹೋತ್ರಾ ತಿಳಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries