HEALTH TIPS

No title

ನಂಬ್ಯಾರಡ್ಕ : ಸರಕಾರಿ ಭೂಮಿಯಲ್ಲಿ  ಸಿಪಿಎಂ ಕಚೇರಿ ಕಟ್ಟಡ
          ಉದ್ಘಾಟನೆಯಿಂದ ಹಿಂದೆ ಸರಿಯದಿದ್ದರೆ ಬೃಹತ್ ಹೋರಾಟ : ಬಿಜೆಪಿ
    ಕಾಸರಗೋಡು: ಕಾಸರಗೋಡು ಜಿಲ್ಲೆಯ ಪುಲ್ಲೂರು ಪೆರಿಯ ಗ್ರಾಮ ಪಂಚಾಯತಿ ವ್ಯಾಪ್ತಿಯ ನಂಬ್ಯಾರಡ್ಕದಲ್ಲಿ ಸರಕಾರಿ ಭೂಮಿಯನ್ನು  ಅನಧಿಕೃತವಾಗಿ ಕೈವಶಪಡಿಸಿ ಅಲ್ಲಿ  ಸಿಪಿಎಂ ಬ್ರಾಂಚ್ ಸಮಿತಿಯ ಕಚೇರಿ ಕಟ್ಟಡ ನಿಮರ್ಿಸಿರುವುದು ಬೆಳಕಿಗೆ ಬಂದಿದೆ. ಈ ನಿಟ್ಟಿನಲ್ಲಿ  ಬಿಜೆಪಿ ಕಾಸರಗೋಡು ಜಿಲ್ಲಾ  ಸಮಿತಿಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯ ರೂಪುರೇಷೆ ತಯಾರಿಸಲಾಗುತ್ತಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
     ಪ್ರಸ್ತುತ ಕಟ್ಟಡವನ್ನು  ಸೆ.30ರಂದು ಸಿಪಿಎಂ ಅಖಿಲ ಭಾರತ ಪ್ರಧಾನ ಕಾರ್ಯದಶರ್ಿ ಸೀತಾರಾಮ್ ಯಚೂರಿ ಉದ್ಘಾಟಿಸಲಿದ್ದಾರೆ. ಆದರೆ ಸರಕಾರಿ ಭೂಮಿ ಕೈವಶಪಡಿಸಿದ ಸ್ಥಳದಲ್ಲಿ  ಸಿಪಿಎಂ ನಿಮರ್ಿಸಿದ ಕಟ್ಟಡದ ಉದ್ಘಾಟನೆಯಿಂದ ಸೀತಾರಾಮ್ ಯಚೂರಿ ಹಿಂದೆ ಸರಿಯಬೇಕು ಹಾಗೂ ಪ್ರಸ್ತುತ ಸ್ಥಳವನ್ನು  ಸರಕಾರಕ್ಕೆ ಬಿಟ್ಟುಕೊಡಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ, ನ್ಯಾಯವಾದಿ ಕೆ.ಶ್ರೀಕಾಂತ್ ಆಗ್ರಹಿಸಿದ್ದಾರೆ.
   ಈ ನಿಟ್ಟಿನಲ್ಲಿ  ಸೀತಾರಾಮ್ ಯಚೂರಿ ತನ್ನ  ಪಕ್ಷದ ಕಾರ್ಯಕರ್ತರಿಗೆ ಆದೇಶ ನೀಡಬೇಕೆಂದು ಅವರು ಒತ್ತಾಯಿಸಿದರು. ಈ ಬಗ್ಗೆ  ತಾನು ಸಿಪಿಎಂ ಅಖಿಲ ಭಾರತ ಪ್ರಧಾನ ಕಾರ್ಯದಶರ್ಿಯವರಿಗೆ ಇ ಮೇಲ್ ಸಂದೇಶ ರವಾನಿಸಿದ್ದಾಗಿ ಅವರು ವಿವರಿಸಿದರು.
    ಕಾಸರಗೋಡು ಪ್ರೆಸ್ಕ್ಲಬ್ನಲ್ಲಿ  ನಡೆಸಿದ ತುತರ್ು ಸುದ್ದಿಗೋಷ್ಠಿಯಲ್ಲಿ  ಅವರು ಮಾತನಾಡಿ, ಸಿಪಿಎಂ ತನ್ನ  ಆಡಳಿತದ ಬಲದಿಂದ ಪೊಲೀಸ್ ಬಲವನ್ನೂ  ಉಪಯೋಗಿಸಿಕೊಂಡು ಸರಕಾರದ ಎಲ್ಲಾ  ಕಾನೂನುಗಳನ್ನು  ಗಾಳಿಗೆ ತೂರಿ ಸರಕಾರಿ ಭೂಮಿಯಲ್ಲಿ  ತಮ್ಮ  ಪಕ್ಷದ ಕಚೇರಿಯಯನ್ನು  ನಿಮರ್ಿಸಿದೆ. ಇದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದ್ದು, ಸಿಪಿಎಂ ಪಕ್ಷಕ್ಕೆ ಪ್ರಜಾಪ್ರಭುತ್ವದಲ್ಲಿ  ನಂಬಿಕೆಯೇನಾದರೂ ಇದ್ದರೆ ಸರಕಾರಿ ಭೂಮಿಯನ್ನು  ಮರಳಿಸಬೇಕು ಎಂದು ತೀಕ್ಷ್ಣವಾಗಿ ನುಡಿದರು.
ಕೇರಳದ ಕಂದಾಯ ಖಾತೆ ಸಚಿವರೂ ಜಿಲ್ಲೆಯ ಉಸ್ತುವಾರಿ ಸಚಿವರೂ ಆದ ಇ.ಚಂದ್ರಶೇಖರನ್ರ ಜಿಲ್ಲೆಯಲ್ಲಿ  ಸರಕಾರಿ ಭೂಮಿಯನ್ನು  ವಶಪಡಿಸಿ ಸಿಪಿಎಂ ತನ್ನ  ಪಕ್ಷದ ಕಚೇರಿಯನ್ನು  ನಿಮರ್ಿಸಿರುವುದು ದುರದೃಷ್ಟವಾಗಿದೆ. ಇದಕ್ಕೆ ಪುಲ್ಲೂರು ಪೆರಿಯ ಗ್ರಾಮ ಪಂಚಾಯತ್ನ ಅನುಮತಿ ಕೂಡ ಲಭಿಸಿಲ್ಲ.  ಹೀಗಿದ್ದರೂ ಇಲ್ಲಿ  ಕಟ್ಟಡ ನಿಮರ್ಿಸಲಾಗಿದೆ. ಸುಶೀಲಾ ಗೋಪಾಲನ್ ಸ್ಮಾರಕ ಮಂದಿರ ಎಂಬ ಹೆಸರಿನಲ್ಲಿ  ಇಲ್ಲಿ  ಎರಡು ಅಂತಸ್ತಿನ ಬೃಹತ್ ಕಟ್ಟಡವನ್ನು  ನಿಮರ್ಿಸಲಾಗಿದೆ.
ಆದರೆ ಈ ದೊಡ್ಡ  ಕಟ್ಟಡ ನಿಮರ್ಾಣಕ್ಕೆ ಫಂಡ್ ಎಲ್ಲಿಂದ ಬಂತು ಎಂಬ ಬಗ್ಗೆಯೂ ಶಂಕೆಯಿದೆ. ಕಟ್ಟಡ ನಿಮರ್ಾಣದ ವೇಳೆ ಈ ಕಟ್ಟಡ ನಿಮರ್ಾಣಕ್ಕೆ ಸಂಬಂಸಿ ಹಲವಾರು ದೂರುಗಳು ದೊರಕಿದ ಹಿನ್ನೆಲೆಯಲ್ಲಿ  ಕಟ್ಟಡ ನಿಮರ್ಾಣ    ಸ್ಥಗಿತಗೊಳಿಸಬೇಕೆಂದು ಹೊಸದುರ್ಗ ತಹಶೀಲ್ದಾರರು ಸಂಬಂಧಪಟ್ಟವರಿಗೆ ನೋಟೀಸು ನೀಡಿದರೂ ಸಿಪಿಎಂ ಪಕ್ಷದ ಗೂಂಡಾ ಕಾರ್ಯಕರ್ತರು ತಹಶೀಲ್ದಾರರಿಗೆ ಮತ್ತು  ಕಂದಾಯ ಅಧಿಕಾರಿಗಳಿಗೆ ಆಡಳಿತದ ಬೆಂಬಲದಲ್ಲಿ  ಬೆದರಿಕೆಯೊಡ್ಡಿ  ಕಟ್ಟಡ ನಿಮರ್ಾಣ ಪೂತರ್ಿಗೊಳಿಸಿದರು ಎಂದು ಕೆ.ಶ್ರೀಕಾಂತ್ ಹೇಳಿದ್ದಾರೆ.
   ಒಂದು ವೇಳೆ ಸೆ.30ರಂದು ಪ್ರಸ್ತುತ ಕಟ್ಟಡ ಉದ್ಘಾಟನೆಗೊಂಡರೆ ಜಿಲ್ಲಾಧಿಕಾರಿಗಳು ಮತ್ತು  ಜಿಲ್ಲಾ  ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಸ್ತುತ ಕಾರ್ಯಕ್ರಮಕ್ಕೆ ತಡೆಯೊಡ್ಡಬೇಕು ಮತ್ತು  ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಎಂದು ಬಿಜೆಪಿ ಜಿಲ್ಲಾಧ್ಯಕ್ಷರು ತಿಳಿಸಿದರು. ಮುಂದಿನ ದಿನಗಳಲ್ಲಿ  ಬಿಜೆಪಿ ಈ ಕುರಿತು ಕಾನೂನುಪ್ರಕಾರ ಮತ್ತು  ರಾಜಕೀಯವಾಗಿ ಉಗ್ರವಾದ ವಿವಿಧ ರೀತಿಯ ಹೋರಾಟಗಳನ್ನು  ನಡೆಸಲಿದೆ ಎಂದು ಕೆ.ಶ್ರೀಕಾಂತ್ ಮುನ್ನೆಚ್ಚರಿಕೆ ನೀಡಿದರು.
    ಪತ್ರಿಕಾಗೋಷ್ಠಿಯಲ್ಲಿ  ಬಿಜೆಪಿ ನೇತಾರರಾದ ಕೆ.ಟಿ.ಪುರುಷೋತ್ತಮನ್, ಎನ್.ಬಾಬುರಾಜ್, ಟಿ.ಪಿ.ಸುರೇಶ್ ಮುಂತಾದವರು ಉಪಸ್ಥಿತರಿದ್ದರು.
   ಸಿಪಿಎಂನಿಂದ ಆಡಳಿತ ದುರುಪಯೋಗ : ಸಿಪಿಎಂ ಪಕ್ಷವು ಕಾಸರಗೋಡು ಜಿಲ್ಲೆಯಲ್ಲಿ  ಆಡಳಿತವನ್ನು  ದುರುಪಯೋಗ ಮಾಡುತ್ತಿದೆ. ಪೊಲೀಸ್ ಬಲವನ್ನು  ತನ್ನ  ಪಕ್ಷಕ್ಕಾಗಿ ಉಪಯೋಗಿಸುತ್ತಿದೆ. ಪ್ರಜಾಪ್ರಭುತ್ವಕ್ಕೆ ಸಿಪಿಎಂ ಪಕ್ಷವು ಬೆಂಬಲ ನೀಡುತ್ತಿಲ್ಲ. ಈ ನಿಟ್ಟಿನಲ್ಲಿ  ಸಿಪಿಎಂ ನೇತಾರರು ಮತ್ತು  ಕಾರ್ಯಕರ್ತರು ಭಾರತದ ಸಂವಿಧಾನವನ್ನು  ಓದುವುದೊಳಿತು. ಕಾಸರಗೋಡು ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದಲೂ ಆ ಪಕ್ಷಕ್ಕೆ ಕಾಳಜಿ ಇಲ್ಲ. ಕೇವಲ ಗೂಂಡಾಗಿರಿಯಿಂದ ಮಾತ್ರ ಎಲ್ಲವನ್ನೂ  ಸಾಸಲು ಸಾಧ್ಯವಿಲ್ಲ. ಸರಕಾರಿ ಭೂಮಿಯನ್ನು  ಗೂಂಡಾಬಲದಿಂದ ಕೈವಶವಿರಿಸಿಕೊಂಡರೆ ಅದಕ್ಕೆ ಪ್ರತ್ಯುತ್ತರ ಬಿಜೆಪಿ ಜಿಲ್ಲಾ  ಸಮಿತಿಯ ನೇತೃತ್ವದಲ್ಲಿ ನೀಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries