ಮಂಜೇಶ್ವರ: ಮಂಜೇಶ್ವರ ಬ್ಲಾಕ್ ಪಂಚಾಯತಿ ಕಚೇರಿಯಲ್ಲಿ "ಹರಿತದೃಷ್ಟಿ" ಮೊಬೈಲ್ ಅಪ್ಲಿಕೇಷನ್ ತರಬೇತಿ ಕಾರ್ಯಕ್ರಮ ನಡೆಯಿತು. ಮಂಜೇಶ್ವರ ಬ್ಲಾಕ್ ನಿಂದ ಮಂಗಲ್ಪಾಡಿ, ವರ್ಕಾಡಿ, ಪುತ್ತಿಗೆ, ಮೀಂಜ, ಮಂಜೇಶ್ವರ, ಪೈವಳಿಕೆ, ಎಣ್ಮಕಜೆ ಪಂಚಾಯತಿಗಳ ಕಾರ್ಯದರ್ಶಿಗಳು, ಸಹಕಾರ್ಯದರ್ಶಿಗಳು, ಕೃಷಿ ಅಧಿಕಾರಿಗಳು, ಸಹಾಯಕ ಅಭಿಯಂತರರು(ಎಲ್.ಎಸ್.ಜಿ.ಡಿ.)ಗಳು, ಅಕ್ರೆಡಿಟೆಡ್ ಅಭಿಯಂತರರು, ಓವರ್ ಸೀಯರ್ ಗಳು, ಗ್ರಾಮ ವಿಸ್ತರಣೆ ಅಧಿಕಾರಿಗಳು, ಗ್ರಾಮಪಂಚಾಯತಿ ತಾಂತ್ರಿಕ ಸಹಾಯಕರು ಮೊದಲಾದವರಿಗಾಗಿ ಈ ತರಬೇತಿ ನಡೆಯಿತು.
ಮಂಜೇಶ್ವರ ಬ್ಲಾಕ್ ಜೊತೆ ವಿಸ್ತರಣಾಧಿಕಾರಿ ನೂತನ ಕುಮಾರಿ ತರಬೇತಿ ಉದ್ಘಾಟಿಸಿದರು. ಇನ್ ಫಾರ್ಮೇಷನ್ ಕೇರಳ ಮಿಷನ್ ಆರ್.ಪಿ.ಗಳಾದ ಪಿ.ಕೆ.ಪ್ರಜೀತ್, ಎಂ.ಅನೀಷ್ ತರಗತಿ ನಡೆಸಿದರು. ಕಿಲಾ ಫ್ಯಾಕ್ವೆಲ್ಟಿ ಎಚ್.ಕೃಷ್ಣ ಉಪಸ್ಥಿತರಿದ್ದರು. ಹರಿತ ಕೇರಳಂ ಮಿಷನ್ ಸಂಪನ್ಮೂಲವ್ಯಕ್ತಿ ಎ.ಪಿ.ಅಭಿರಾಜ್ ಪ್ರಾಸ್ತಾವಿಕ ಭಾಷಣಮಾಡಿದರು.