ಕಾಸರಗೋಡು: ಜಿಲ್ಲೆಯಲ್ಲಿ ಅತ್ಯಧಿಕ ಕೋವಿಡ್ 19 ಸೋಂಕು ಖಚಿತಗೊಂಡರಿರುವ 6 ಗ್ರಾಮಪಂಚಾಯತ್ ಗಳಲ್ಲಿ ರಾಜ್ಯ ಸರ್ಕಾರ ಆದೇಶಿಸಿರುವ ಜಾಗಗಳಲ್ಲಿ ಪೆÇಲೀಸರು ವಿಶೇಷ ನಿಗಾ ಇರಿಸುವರು. ಅಲ್ಲಿ ಜನರಿಗೆ ಕಠಿಣ ನಿಯಂತ್ರಣಗಳನ್ನು ಜಾರಿಗೊಳಿಸಲಾಗುವುದು ಎಂದು ಐ.ಜಿ.ವಿಜಯ್ ಸಖಾರೆ ತಿಳಿಸಿದರು.
ಮಧೂರು, ಮೊಗ್ರಾಲ್ ಪುತ್ತೂರು, ಚೆಮ್ನಾಡ್, ಪಳ್ಳಿಕ್ಕರೆ, ಉದುಮಾ ಗ್ರಾಮಪಂಚಾಯತ್ ಮತ್ತು ಕಾಸರಗೋಡು ನಗರಸಭೆಯ ಪ್ರದೇಶಗಳಲ್ಲಿ ಪೆÇಲೀಸರು ವಶೇಷ ನಿಗಾ ಇರಿಸುವರು. ಇಲ್ಲಿ ಪೆÇಲೀಸರ ಬಿಗಿ ಕಾವಲು ಇರುವುದು. ಇಲ್ಲಿ ಜನರಿಗೆ ಬೇಕಾದ ಅಗತ್ಯದ ಸಾಮಾಗ್ರಿಗಳನ್ನು ಪೆÇಲೀಸರೇ ವಿತರಿಸುವರು. ಇದಕ್ಕಾಗಿ 9497935780 ಎಂಬ ವಾಟ್ಸ್ ಆಪ್ ಗೆ ಸಂದೇಶ ರವಾನಿಸಿದರೆ ಪೆÇಲೀರೇ ನೇರವಾಗಿ ಅಂಥವರ ಮನೆಗಳಿಗೆ ಸಾಮಾಗ್ರಿ ತಲಪಿಸುವರು. ಹೆಸರು, ದೂರವಾಣಿ ನಂಬ್ರ, ಅಗತ್ಯವಿರುವ ಸಾಮಾಗ್ರಿ ಇತ್ಯಾದಿಗಳನ್ನು ಸಂದೇಶದಲ್ಲಿ ತಿಳಿಸುವಂತೆ ಐ.ಜಿ. ಹೇಳಿದರು. ಜಿಲ್ಲೆಯ ವಯೋವೃದ್ಧರಿಗೆ, ವಿಶೇಷಚೇತನರಿಗೆ ಅಗತ್ಯವಿರುವ ಔಷಧ, ಇನ್ನಿತರ ಸೇವೆಗಳಿಗೆ ಈ ಸೌಲಭ್ಯವನ್ನು ಬಳಸಬಹುದು ಎಂದವರು ಹೇಳಿರುವರು.
ವಾಹನ ಸಂಚಾರ ನಿಯಂತ್ರಣ:
ವಾಹನಗಳಲ್ಲಿ ಸಂಚಾರ ನಡೆಸುವ ವೇಳೆ ನಿಯಂತ್ರಣ ಹೇರಲಾಗಿದೆ ಎಂದು ಐ.ಜಿ.ವಿಜಯ್ ಸಖಾರೆ ತಿಳಿಸಿದರು. ಕಾರಿನಲ್ಲಿ ಚಾಲಕರಲ್ಲದೆ ಒಬ್ಬರು, ದ್ವಿಚಕ್ರವಾಹನಗಳಲ್ಲಿ ಒಬ್ಬರು ಮಾತ್ರ ಸಂಚಾರ ನಡೆಸಬಹುದು. ಮನೆಗಳಿಗೆ ಅಗತ್ಯದ ಸಾಮಾಗ್ರಿಗಳ ಖರೀದಿಯ ಹೆಸರಲ್ಲಿ ಒದು ಮನೆಯಿಂದ ಒಬ್ಬರಿಗಿಂತ ಅಧಿಕ ಮಂದಿ ಹೊರಗಿಳಿಯುವುದು ತಮ್ಮ ಗಮನಕ್ಕೆ ಬಂದಿದೆ. ಇಂಥಾ ಆದೇಶ ಉಲ್ಲಂಘನೆ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದಾಗಿ ಅವರ ಎಚ್ಚರಿಕೆ ನೀಡಿದರು.
ಕೋಯಿಕೋಡ್ ವಲಯ ಐ.ಜಿ. ಅಶೋಕ್ ಯಾದವ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ.ಎಸ್.ಸಾಬು, ಟೆಲಿ ಕಮ್ಯೂನಿಕೇಷನ್ ಎಸ್.ಪಿ.ಡಿ.ಶಿಲ್ಪಾ ಈ ವೇಳೆ ಜೊತೆಗಿದ್ದರು.