ಕಾಸರಗೋಡು: ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿರುವವರ ಮರು ಸ್ಯಾಂಪಲ್ಗಳಲ್ಲಿ ಪೆÇಸಿಟಿವ್ ಫಲಿತಾಂಶ ಬಂದಿದೆ. ಆದರೆ ಕೊರೊನಾ ವೈರಸ್ ಬಾ„ತರ ಸಂಪರ್ಕಿಸಿದರೆನ್ನುವವರ ಸ್ಯಾಂಪಲ್ಗಳ ಪೈಕಿ ಶೇ.90 ರಷ್ಟು ನೆಗೆಟಿವ್ ಆಗಿದೆ. ಇನ್ನೂ 150 ರಷ್ಟು ಸ್ಯಾಂಪಲ್ ವರದಿ ಬರಲು ಬಾಕಿಯಿದೆ. ಮೂರೋ, ನಾಲ್ಕೋ ದಿನಗಳ ಬಳಿಕ ರೋಗಿಯ ಸ್ಯಾಂಪಲ್ಗಳನ್ನು ಲ್ಯಾಬ್ಗೆ ಕಳುಹಿಸಿಕೊಡಲಾಗುತ್ತದೆ.
ಮೊದಲಿಗೆ ಕೊರೊನಾ ವೈರಸ್ ರೋಗ ದೃಢೀಕರಿಸಿದ ವ್ಯಕ್ತಿಯ ಮೂರು ಸ್ಯಾಂಪಲ್ಗಳೂ ಪೆÇಸೆಟಿವ್ ಆಗಿದೆ. ಮಾ.16, 19 ರಂದು ಆಸ್ಪತ್ರೆಗೆ ದಾಖಲಾದ ವ್ಯಕ್ತಿಯ ಸ್ಯಾಂಪಲ್ ಕೂಡಾ ಪೆÇಸೆಟಿವ್ ಆಗಿದೆ. ಮಾ.20, 21 ರಂದು ದೃಢೀಕರಿಸಿದ 12 ಮಂದಿ, ಮಾ.22 ರಂದು ದೃಢಗೊಂಡಿರುವ ಐವರ ಸ್ಯಾಂಪಲ್ಗಳಲ್ಲೂ ನೆಗೆಟಿವ್ ಫಲಿತಾಂಶ ಬಂದಿಲ್ಲ. ಮಾ.23 ರಂದು ದೃಢೀಕರಿಸಿದ 19 ಮಂದಿಯ ಹಾಗು ಮಾ.24 ರಂದು ಪೆÇಸೆಟಿವ್ ಕಂಡುಕೊಂಡ ಆರು ಮಂದಿಯ, ಮಾ.26 ರಂದು ಮೂರು ಮಂದಿಯ ಸ್ಯಾಂಪಲ್ ಮರು ಕಳುಹಿಸಲಾಗಿದ್ದರೂ ವರದಿ ಬಂದಿಲ್ಲ. ಮಾ.27 ರಂದು ದೃಢೀಕರಿಸಿದ 34 ಮಂದಿಯ ಸ್ಯಾಂಪಲ್ಗಳನ್ನು ಎರಡು ದಿನಗಳೊಳಗೆ ಕಳುಹಿಸಿಕೊಡಲಾಗುವುದು.
ರೋಗ ದೃಢೀಕರಿಸಿದ 82 ಮಂದಿಯ ಪೈಕಿ 16 ಮಂದಿಗೆ ಮಾತ್ರ ಸಂಪರ್ಕದಿಂದ ಕೊರೊನಾ ವೈರಸ್ ಸೋಂಕು ಬಾ„ಸಿತ್ತು. ಇವರೆಲ್ಲರೂ ರೋಗ ಬಾ„ಸಿದ ವ್ಯಕ್ತಿಗಳ ಸಂಬಂಧಿಕರು.
ಬೆಲೆಯೇರಿಕೆ ತಡೆಯಲು ಕ್ರಮ : ಆಹಾರ ಸಾಮಾಗ್ರಿಗಳನ್ನು ಗೋದಾಮುಗಳಲ್ಲಿ ಸಂಗ್ರಹದಲ್ಲಿಟ್ಟು ಕೃತಕ ಬೆಲೆಯೇರಿಕೆ ಸೃಷ್ಟಿಸುವುದನ್ನು ತಡೆಯಲು ನಡೆಸಿದ ತಪಾಸಣೆಯಲ್ಲಿ ನಗರದ ಹಳೆ ಬಸ್ ನಿಲ್ದಾಣ ಪರಿಸರದ ಮುಚ್ಚಲಾಗಿದ್ದ ಗೋದಾಮು, ರಖಂ ಅಂಗಡಿಯನ್ನು ತೆರೆಸಲಾಯಿತು.
ಕಾಸರಗೋಡು ತಾಲೂಕು ನಿತ್ಯೋಪಯೋಗಿ ಸಾಮಾಗ್ರಿ ವಿತರಣೆ ಅ„ಕಾರಿ ಪಿ.ಕೃಷ್ಣ ಕುಮಾರ್ ನೇತೃತ್ವದಲ್ಲಿ ಆಹಾರ ಭದ್ರತೆ ಇಲಾಖೆ, ಲೀಗಲ್ ಮೆಟ್ರೋಲಜಿ, ಕಂದಾಯ ಇಲಾಖೆಯ ಅ„ಕಾರಿಗಳು, ಸಿಬ್ಬಂದಿಗಳು ತಪಾಸಣೆ ನಡೆಸಿದರು. ಇದಕ್ಕಾಗಿ ಪೆÇಲೀಸರ ನೆರವನ್ನು ಪಡೆಯಲಾಗಿತ್ತು. ಎಡಿಎಂ ಎನ.ದೇವಿದಾಸ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ತಪಾಸಣೆ ನಡೆಸಲಾಗಿದೆ. ರಖಂ ವ್ಯಾಪಾರದಂಗಡಿ ಮತ್ತು ಗೋದಾಮನ್ನು ತೆರೆಸಿದರು.
ಅಕ್ಕಿ ಮೊದಲಾದ ದಿನಸಿ ಸಾಮಾಗ್ರಿಗಳ ಬೃಹತ್ ಸಂಗ್ರಹ ಗೋದಾಮಿನಲ್ಲಿತ್ತು. ಅಂಗಡಿ ಮತ್ತು ಗೋದಾಮಿನ ಮಾಲಕನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಅವರು ತಿಳಿಸಿದ್ದಾರೆ. ನಗರ ಪ್ರದೇಶ ಹಾಗು ಪರಿಸರದ ಪ್ರದೇಶದ ಅಂಗಡಿಗಳಿಗೆ ಇಲ್ಲಿಂದ ನಿತ್ಯೋಪಯೋಗಿ ಸಾಮಾಗ್ರಿಗಳು ವಿತರಿಸಲಾಗುತ್ತಿತ್ತು.