HEALTH TIPS

ಕರುಣೆ ತೋರದ ಗಡಿ ಪ್ರದೇಶದ ಅಧಿಕಾರಿಗಳು : ಮತ್ತೆ ಇನ್ನೊಬ್ಬರು ಮಹಿಳೆ ಬಲಿ


       ಮಂಜೇಶ್ವರ : ತುರ್ತು ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ರೋಗಿಗಳನ್ನು ಕರೆದೊಯ್ಯುವಾಗ ಗಡಿ ಪ್ರದೇಶವಾದ ತಲಪಾಡಿಯಲ್ಲಿ ಅನುಮತಿ ನೀಡದಿರುವ  ಹಿನ್ನೆಲೆಯಲ್ಲಿ ಒಂದು ಸಾವು ಸಂಭವಿಸಿದ ಬೆನ್ನಲ್ಲೇ ಶನಿವಾರ  ಸಂಜೆ ಮಹಿಳೆಯೊಬ್ಬರನ್ನು ತುರ್ತು ಚಿಕಿತ್ಸೆಗೆ ಗಡಿಯಲ್ಲಿ ಅಂಗಾಲಾಚಿದರೂ ಅಂಬುಲೆನ್ಸ್ ಗೆ ಪ್ರವೇಶ ಕೊಡದ ಕರ್ನಾಟಕ ಪೆÇಲೀಸರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
     ಶನಿವಾರ ಸಂಜೆ ತಲಪಾಡಿ ಗಡಿಯಲ್ಲಿ  ಚಿಂತಾಜನಕ ಸ್ಥಿತಿಯಲ್ಲಿದ್ದ ಬಂಟ್ವಾಳ ಬಿ.ಸಿ.ರೋಡಿನ ಪಾತುಂಞ(70) ಎಂಬವರಿಗೆ ತುರ್ತು ಚಿಕಿತ್ಸೆಗಾಗಿ ಅಂಗಾಲಾಚಿದರೂ ಕರ್ನಾಟಕ ಪೆÇಲೀಸರು ಪ್ರವೇಶ ನೀಡಿರಲಿಲ್ಲ. ಭಾನುವಾರ ಅವರು ಇಹಲೋಕ ತ್ಯಜಿಸಿದ್ದಾರೆ. ಪಾತುಂಞ ಅವರು ಮಂಜೇಶ್ವರ ಮೊಮ್ಮಗಳ ಮನೆಯಲ್ಲಿದ್ದರು.
         ಯಾವ ಶತ್ರುಗಳಿಗೂ ಈ ಸ್ಥಿತಿ ಬಾರದಿರಲಿ ಎಂಬುದಾಗಿ ಇಲ್ಲಿಯ ಜನತೆ ಬೇಡಿ ಕೊಳ್ಳುತ್ತಿರುವ ದೃಶ್ಯ ಕಂಡು ಬರುತ್ತಿದೆ.
        ಅಭಿಮತ:
   ಕರೊನಾ ವೈರಸಿಗಿಂತಲೂ ಹೆಚ್ಚಾಗಿ ಗಡಿ ಪ್ರದೇಶವನ್ನು ಮುಚ್ಚಿರುವುದರಿಂದ ಹೆಚ್ಚಿನ ಸಾವುಗಳು ಸ0ಭವಿಸುವ ನಾಧ್ಯತೆಗಳು ಗಡಿ ಪ್ರದೇಶದಲ್ಲಿ ಎದ್ದು ಕಾಣುತ್ತಿದೆ.
ಇನ್ನಾದರೂ ಕರ್ನಾಟಕ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿದೆ.
                               ರಹಿಮಾನ್ ಉದ್ಯಾವರ
                             ಕಾರ್ಯದರ್ಶಿ ಮಂಜೇಶ್ವರ ಗ್ರಾಹಕರ ವೇದಿಕೆ

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries