ನವದೆಹಲಿ: ದೇಶಾದ್ಯಂತ ಮಾರಕ ಕರೋನ ವೈರಸ್ ವಿರುದ್ದ ಹೋರಾಡಿ 86 ಮಂದಿ ಪೂರ್ಣ ಗುಣಮುಖರಾಗಿ ಮನೆಯವರ , ನೆರೆಹೊರೆಯವರ ಮುಖದಲ್ಲಿ, ಬಂಧು ಬಗಿನಿಯರ ಹೃದಯದಲ್ಲಿ ಹೊಸ ಭರವಸೆ, ಹೊಸ ಆಶಯ ಮೂಡಿಸಿದ್ದಾರೆ. ದೇಶಕ್ಕೆ ಹೊಸ ಸಂದೇಶ ನೀಡಿದ್ದಾರೆ. ಮಾನವ ಪ್ರಯತ್ನಕ್ಕೆ ಮಾತ್ರ ಅಂತಿಮ ಗೆಲುವು ಎಂಬುದನ್ನು ಅವರುಗಳು ನಿರೂಪಿಸಿದ್ದಾರೆ.
ದೇಶದಲ್ಲಿ ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 25ಕ್ಕೆ ತಲುಪಿದೆ. 86 ಮಂದಿ ಕೋವಿಡ್ ಸಮರದಲ್ಲಿ ಗೆಲುವು ದಾಖಲಿಸಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ.
ದೇಶಾದ್ಯಂತ ಮಾರಕ ಕರೋನ ಸೋಂಕಿತರ ಸಂಖ್ಯೆ 979ಕ್ಕೆ ಏರಿಕೆಯ ನಡುವೆಯೂ ಕೊಂಚ ನೆಮ್ಮದಿಯ ಸುದ್ದಿಯೊಂದು ಈ ಮೂಲಕ ಬಹಿರಂಗವಾಗಿದೆ ಕರೋನ ಶಂಕಿತ ಪೈಕಿ ಪೈಕಿ ಶೇ.10ರಷ್ಟು ಗುಣಮುಖರಾಗುತ್ತಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.