HEALTH TIPS

ಕೊರೊನಾ: ರಾಜ್ಯದಲ್ಲಿ 58 ರೋಗಿಗಳಲ್ಲಿ ಪತ್ತೆ-ಕಾಸರಗೋಡಲ್ಲಿ 3 ಮಂದಿಯಲ್ಲಿ ಸೋಂಕು


       ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ ಮೂವರಿಗೆ ಕೋವಿಡ್ ಸೋಂಕು ಖಚಿತಗೊಂಡಿದೆ. ಮೇ 19ರಂದು ಕುವೈತ್‍ನಿಂದ ಆಗಮಿಸಿದ್ದ ಪಿಲಿಕೋಡ್ ನಿವಾಸಿಯಾಗಿರುವ 33 ವರ್ಷದ ವ್ಯಕ್ತಿಗೆ, ಮೇ 17ರಂದು ದುಬಾಯಿಯಿಂದ ಆಗಮಿಸಿದ್ದ ಮಧೂರು ನಿವಾಸಿಯಾಗಿರುವ 68 ವರ್ಷದ ವ್ಯಕ್ತಿಗೆ, ಮೇ 21ರಂದು ಮಹಾರಾಷ್ಟ್ರದಿಂದ ಬಂದಿದ್ದ 29 ವರ್ಷದ ಚೆಮ್ನಾಡ್ ನಿವಾಸಿಗೆ ರೋಗ ಖಚಿತವಾಗಿದೆ.
       ಜಿಲ್ಲೆಯಲ್ಲಿ ಒಟ್ಟು 3595 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 2987 ಮಂದಿ, ಆಸ್ಪತ್ರೆಗಳಲ್ಲಿ 608 ಮಂದಿ ನಿಗಾದಲ್ಲಿದ್ದಾರೆ. 413 ಮಂದಿ ಶನಿವಾರ ತಮ್ಮ ನಿಗಾ ಅವ„ ಪೂರ್ಣಗೊಳಿಸಿದ್ದಾರೆ. ಶನಿವಾರ ನೂತನವಾಗಿ 343 ಮಂದಿಯನ್ನು ಐಸೊಲೇಷನ್ ವಾರ್ಡಿಗೆ ದಾಖಲಿಸಲಾಗಿದೆ.
       ಜಿಲ್ಲೆಯಲ್ಲಿ 6902 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 6020 ಮಂದಿಯ ತಪಾಸಣೆ ನೆಗೆಟಿವ್ ಆಗಿದೆ. ಜಿಲ್ಲೆಯಲ್ಲಿ ಈಗ ಒಟ್ಟು 73 ಮಂದಿ ಕೋವಿಡ್ ರೋಗಿಗಳಿದ್ದಾರೆ.       
    ಕೇರಳದಲ್ಲಿ 58 ಮಂದಿಗೆ ಸೋಂಕು : ಕೇರಳದಲ್ಲಿ ಶನಿವಾರ ಹೊಸದಾಗಿ 58 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ತೃಶ್ಶೂರು ಜಿಲ್ಲೆಯ 10, ಪಾಲ್ಘಾಟ್-9, ಕಣ್ಣೂರು-8, ಕೊಲ್ಲಂ-4, ಇಡುಕ್ಕಿ-4, ಎರ್ನಾಕುಳಂ-4, ಕಲ್ಲಿಕೋಟೆ-4, ಕಾಸರಗೋಡು-3, ತಿರುವನಂತಪುರ-2, ಆಲಪ್ಪುಳ-2, ಕೋಟ್ಟಯಂ-1 ರೋಗ ಬಾ„ಸಿದೆ. ಇದಲ್ಲದೆ 7 ಮಂದಿ ಏರ್ ಇಂಡಿಯಾ ಸಿಬ್ಬಂದಿಗಳಿಗೆ ರೋಗ ಬಾಧಿಸಿದೆ.
      ಈ ಪೈಕಿ ಆಲಪ್ಪುಳ ಜಿಲ್ಲೆಯಲ್ಲಿ ಕರಳು ರೋಗದಿಂದ ಚಿಕಿತ್ಸೆ ಪಡೆಯುತ್ತಿದ್ದಂತೆ ಮೇ 29 ರಂದು ಸಾವಿಗೀಡಾದ ವ್ಯಕ್ತಿಯ ಪರೀಕ್ಷೆ ಫಲವು ಕೊರೊನಾ ಖಾತರಿಪಡಿಸಿದೆ. 17 ಮಂದಿ ವಿದೇಶದಿಂದ (ಕುವೈಟ್-6, ಯುಎಇ-6, ಒಮಾನ್-2, ಸೌದಿ ಅರೇಬಿಯಾ-1, ಖತ್ತರ್-1, ಇಟೆಲಿ-1) ಬಂದವರು. 31 ಮಂದಿ ಇತರ ರಾಜ್ಯಗಳಿಂದ(ಮಹಾರಾಷ್ಟ್ರ-19, ತಮಿಳುನಾಡು-9, ತೆಲಂಗಾಣ-1, ದೆಹಲಿ-1, ಕರ್ನಾಟಕ-1) ಬಂದವರು. ಒಬ್ಬರು ಆರೋಗ್ಯ ಕಾರ್ಯಕರ್ತರಿಗೂ(ಪಾಲ್ಘಾಟ್), ಇಬ್ಬರಿಗೆ ಸಂಪರ್ಕದಿಂದ (ಕೊಲ್ಲಂ, ಪಾಲ್ಘಾಟ್) ರೋಗ ಬಾಧಿಸಿದೆ.
       ಇದೇ ವೇಳೆ ಚಿಕಿತ್ಸೆ ಪಡೆಯುತ್ತಿದ್ದ 10 ಮಂದಿ ಗುಣಮುಖರಾಗಿದ್ದಾರೆ. ಮಲಪ್ಪುರ-4, ತೃಶ್ಶೂರು-3, ತಿರುವನಂತಪುರ, ಕೋಟ್ಟಯಂ ಮತ್ತು ಕಣ್ಣೂರು ಜಿಲ್ಲೆಯ ತಲಾ ಒಬ್ಬರು ಗುಣಮುಖರಾಗಿದ್ದಾರೆ.
        ವಿವಿಧ ಆಸ್ಪತ್ರೆಗಳಲ್ಲಿ 624 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ 575 ಮಂದಿ ಗುಣಮುಖರಾಗಿದ್ದಾರೆ. ಕೇರಳ ರಾಜ್ಯದಲ್ಲಿ ಒಟ್ಟು ,1,30,157 ಮಂದಿ ನಿಗಾವಣೆಯಲ್ಲಿದ್ದಾರೆ. ಇವರಲ್ಲಿ 1,28,953 ಮಂದಿ ಮನೆಗಳಲ್ಲೂ, 1204 ಮಂದಿ ಆಸ್ಪತ್ರೆಗಳಲ್ಲಿ ನಿಗಾವಣೆಯಲ್ಲಿದ್ದಾರೆ. ಶಂಕಿತ 243 ಮಂದಿಯನ್ನು ಶನಿವಾರ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
     ಈ ತನಕ 65,002 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದ್ದು, ಲಭ್ಯ 62,543 ಮಂದಿ ಫಲಿತಾಂಶ ನೆಗೆಟಿವ್ ಆಗಿದೆ. ರಾಜ್ಯದಲ್ಲಿ ಒಟ್ಟು 106 ಹಾಟ್‍ಸ್ಪಾಟ್ ಪ್ರದೇಶಗಳಿವೆ.
               ಉತ್ತರ ಪ್ರದೇಶಕ್ಕೆ ರೈಲು ರದ್ದು :
     ಉತ್ತರ ಪ್ರದೇಶಕ್ಕೆ ಮೇ 30 ರಂದು ಕಾಂಞಂಗಾಡ್‍ನಿಂದ ಹೊರಡಲಿದ್ದ ಸ್ಪೆಶಲ್ ರೈಲು ಎಂಜಿನ್ ಹಾನಿಗೀಡಾದ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ ಎಂದು ನಗರಸಭಾ ಅಧಿಕಾರಿಗಳು ತಿಳಿಸಿದ್ದಾರೆ.
         ಇದರಿಂದ ಊರಿಗೆ ತೆರಳಲೆಂದು ಶನಿವಾರ ಬೆಳಗ್ಗೆ ಕಾಸರಗೋಡು ನಗರಸಭಾ ಕಚೇರಿ ಪರಿಸರಕ್ಕೆ ಬಂದ 300 ರಷ್ಟು ಉತ್ತರ ಭಾರತದ ಕಾರ್ಮಿಕರು ಸಮಸ್ಯೆಗೀಡಾಗಿದ್ದಾರೆ.
                ಮಾಸ್ಕ್ ಧರಿಸದ 197 ಮಂದಿಗೆ ಕೇಸು : ಮಾಸ್ಕ್ ಧರಿಸಿದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 197 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಈ ವರೆಗೆ ಜಿಲ್ಲೆಯಲ್ಲಿ ಒಟ್ಟು 3748 ಮಂದಿ ವಿರುದ್ಧ ಕೇಸು ದಾಖಲಿಸಿ, ದಂಡ ವಸೂಲಿ ಮಾಡಲಾಗಿದೆ.
              ನಿಷೇಧಾಜ್ಞೆ ಉಲ್ಲಂಘನೆ: 18 ಮಂದಿಗೆ  ಕೇಸು : 
   ನಿಷೇಧಾಜ್ಞೆ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 18 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. 24 ಮಂದಿಯನ್ನು ಬಂಧಿಸಲಾಗಿದ್ದು, 10 ವಾಹನಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 1 ಕೇಸು, ಕಾಸರಗೋಡು 3, ಆದೂರು 1, ಬೇಡಗಂ 1, ಮೇಲ್ಪರಂಬ 1, ಬೇಕಲ 3, ನೀಲೇಶ್ವರ 1, ಚಂದೇರ 2, ಚೀಮೇನಿ 2, ವೆಳ್ಳರಿಕುಂಡ್ 1, ಚಿತ್ತಾರಿಕಲ್ 1, ರಾಜಪುರಂ 1 ಕೇಸು ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಈ ವರೆಗೆ 2538 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. 3200 ಮಂದಿಯನ್ನು ಬಂ„ಸಲಾಗಿದ್ದು, 1086 ವಾಹನಗಳನ್ನು ವಶಪಡಿಸಲಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries