ಬದಿಯಡ್ಕ: ಜಿಲ್ಲಾ ಸಹಕಾರಿ ರಿಜಿಸ್ಟಾರ್ ಜಯಚಂದ್ರನ್ ಅವರು ಶನಿವಾರ ವೃತ್ತಿಯಿಂದ ನಿವೃತ್ತಿ ಹೊಂದಿದ್ದು ನೀರ್ಚಾಲು ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ವಿದಾಯ ಕೂಟ ಏರ್ಪಡಿಸಲಾಗಿತ್ತು.
ನೀರ್ಚಾಲು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಜಯದೇವ ಖಂಡಿಗೆ, ಕಾರ್ಯದರ್ಶಿ ಅಜಿತಕುಮಾರಿ,ಉಪಾಧ್ಯಕ್ಷ ಗಣಪತಿ ಪ್ರಸಾದ ಕುಳಮರ್ವ, ಎಲ್ಲಾ ನಿರ್ದೇಶಕರು, ಬ್ಯಾಂಕ್ ನೌಕರರು ಉಪಸ್ಥಿತರಿದ್ದು ಜಯಚಂದ್ರನ್ ಅವರನ್ನು ಅಭಿನಂದಿಸಿ ಅವರ ಸೇವಾವಧಿಯ ಸಹಕಾರ, ನಿರ್ದೇಶನಗಳನ್ನು ಕೊಂಡಾಡಿ ಬೀಳ್ಕೊಟ್ಟರು.