ಬದಿಯಡ್ಕ: ಬದಿಯಡ್ಕ ಗ್ರಾ.ಪಂ. ವತಿಯಿಂದ ಹಿಂದುಳಿದ ವರ್ಗ, ಜಾತಿ ವಿಭಾಗದ ವಿದ್ಯಾರ್ಥಿಗಳಿಗೆ ಉಚಿತವಾಗಿ ಕೊಡಕಾಡುವ ಕುರ್ಚಿ ಹಾಗೂ ಮೇಜುಗಳನ್ನು ಶುಕ್ರವಾರ ಹಸ್ತಾಂತರಿಸಲಾಯಿತು.
ಸಮಾರಂಭವನ್ನು ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಉದ್ಘಾಟಿಸಿದರು. ಸ್ಥಾಯೀ ಸಮಿತಿ ಅಧ್ಯಕ್ಷ ಶಾಮಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ.ಸದಸ್ಯರುಗಳಾದ ಡಿ.ಶಂಕರ, ಬಾಲಕೃಷ್ಣ ಶೆಟ್ಟಿ, ಶಾಂತಾ, ವಿಶ್ವನಾಥ ಪ್ರಭು, ಹಿಂದುಳಿದ ವರ್ಗ, ಜಾತಿ ವಿಭಾಗದ ಪ್ರಮೋಟರ್ ರಾಮ ಪಟ್ಟಾಜೆ, ಗ್ರಾ.ಪಂ. ಕಾರ್ಯದರ್ಶಿ, ಪೆರಡಾಲ ನವಜೀವನ ಶಾಲಾ ಶಿಕ್ಷಕರು ಮೊದಲಾದವರು ಉಪಸ್ಥಿತರಿದ್ದರು. ನವಜೀವನ ಶಾಲಾ ಮುಖ್ಯೋಪಾಧ್ಯಾಯ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ವಂದಿಸಿದರು.