ಕುಂಬಳೆ: ಕೊಡಗಿನ ಗೌರಮ್ಮ ದತ್ತಿನಿಧಿ ಹಾಗೂ ಹವ್ಯಕ ಮಹಾಮಂಡಲ ಮಾತೃಮಂಡಳಿ ಸಹಯೋಗದಲ್ಲಿ ನಡೆಯುವ 2021ರ ಸಾಲಿನ ಸಣ್ಣ ಕಥಾ ಸ್ಪರ್ಧೆಗೆ ಕಥೆಗಳನ್ನು ಆಹ್ವಾನಿಸಲಾಗಿದೆ. ಹವ್ಯಕ ಮಹಿಳೆಯರಿಗಾಗಿ ನಡೆಯುವ ಸ್ಪರ್ಧೆಯು ಅಖಿಲ ಭಾರತ ಮಟ್ಟದಲ್ಲಿ ನಡೆಯುತ್ತಿದ್ದು, ಹವ್ಯಕ ಮಹಿಳೆಯರು( ವಯೋಮಿತಿ ಇಲ್ಲ, ಹೈಸ್ಕೂಲ್, ಕಾಲೇಜು ವಿದ್ಯಾರ್ಥಿನಿಯರೂ)ಭಾಗವಹಿಸಬಹುದು.
ಹವ್ಯಕ ಭಾಷೆ(ಯಾವುದೇ ಸೀಮೆಯ ಹವ್ಯಕ ಭಾಷೆ ಅಡ್ಡಿಯಿಲ್ಲ)ಯನ್ನು ಬಳಸಬೇಕಾಗಿದ್ದು, ಈ ವರೆಗಿನ ಪ್ರಥಮ ವಿಜೇತೆಯರಿಗೆ ಅವಕಾಶವಿಲ್ಲ ಮಾತ್ರವಲ್ಲ ಈ ವರೆಗೆ ಎಲ್ಲೂ ಪ್ರಕಟವಾಗದ ಸಾಮಾಜಿಕ ಕಥೆಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಸಾಧಾರಣ 8 ಪುಟಕ್ಕೆ ಮೀರದೆ , ಕಾಗದದ ಒಂದೇ ಬದಿಗೆ ಸ್ಪುಟವಾಗಿ ಬರೆದು, ಹೆಸರು,ವಿಳಾಸ ಬೇರೆ ಕಾಗದದಲ್ಲಿ ಬರೆದು ಲಗತ್ತಿಸಿರಬೇಕು. ಕಥೆಯನ್ನು ಪೆÇೀಸ್ಟಿನಲ್ಲೇ ಕಳುಹಿಸಬೇಕು. ಈಮೇಲ್ ಅಥವಾ ಕೊರಿಯರಿನಲ್ಲಿ ಕಳುಹಿಸಿದಲ್ಲಿ ಅದು ಸ್ವೀಕೃತವಾಗದು ಎಂದು ಪ್ರಕಟಣೆ ತಿಳಿಸಿದೆ.
ಕಥಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 3 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ಸ್ಮರಣಿಕೆ, ದ್ವಿತೀಯ ಬಹುಮಾನ 2 ಸಾವಿರ ಹಾಗೂ ತೃತೀಯ ಬಹುಮಾನ 1 ಸಾವಿರ ನಗದು ನೀಡಲಾಗುವುದು. ಆಸಕ್ತರು ಏ.30 ರ ಮೊದಲು ವಿಜಯಾಸುಬ್ರಹ್ಮಣ್ಯ, ಸಂಚಾಲಕಿ ಕೊಡಗಿನ ಗೌರಮ್ಮ ಕಥಾಸ್ಪರ್ಧೆ, ಕಾರ್ತಿಕೇಯ, ನಾರಾಯಣಮಂಗಲ, ಅಂಚೆ ಕುಂಬಳೆ 671321 ಕಾಸರಗೋಡು ಜಿಲ್ಲೆ ಈ ವಿಳಾಸಕ್ಕೆ ಕಥೆಗಳನ್ನು ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ ಮೊ. ಸಂಖ್ಯೆ 8547214125, 6238537267 ಸಂಪರ್ಕಿಸಬಹುದು.