ಕುಂಬಳೆ: ಅಂಬಿಲಡ್ಕ ಶ್ರೀ ಪೂವಾಣಿ ಕಿನ್ನಿಮಾಣಿ ರಾಜನ್ ದೈವಸ್ಥಾನದಲ್ಲಿ ಏ.4ರಿಂದ ಏ.8ರವರೆಗೆ ಬಂಬ್ರಾಣ ಯಜಮಾನ್ ಬಿ.ಮೋಹನ್ದಾಸ್ ರೈ ನೇತೃತ್ವದಲ್ಲಿ ತಂತ್ರಿವರ್ಯ ಬ್ರಹ್ಮಶ್ರೀ ವೇದಮೂರ್ತಿ ಶಂಕರನಾರಾಯಣ ಕಡಮಣ್ಣಾಯ ಕರ್ಕುಳಬೂಡು ಆಚಾರ್ಯತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ.
ಏ.4ರಂದು ಸಂಜೆ 6.30ರಿಂದ ಭಜನೆ, 7.30ರಿಂದ ಬೆಜಪ್ಪೆ ಭಂಡಾರ ಮನೆಯಿಂದ ಹಾಗೂ ಕಿದೂರು ಶ್ರೀ ಮಹಾದೇವ ದೇವಳದಿಂದ ಭಂಡಾರ ಆಗಮನ, 8.30ರಿಂದ ಶ್ರೀ ದೈವಗಳಿಗೆ ತಂಬಿಲ ಬಳಿಕ ಅನ್ನಸಂತರ್ಪಣೆ ನಡೆಯಲಿರುವುದು. ಏ.5ರಂದು ಸಂಜೆ 3ರಿಂದ ಭÀಜನೆ, 4.30ರಿಂದ ಶ್ರೀ ಕಿನ್ನಿಮಾಣಿ ದೈವದ ನೇಮ, ಏ.6ರಂದು ಸಂಜೆ 3ರಿಂದ ಭಜನೆ, 4.30ರಿಂದ ಶ್ರೀ ಪೂಮಾಣಿ ದೈವದ ನೇಮ, ಪ್ರಸಾದ ವಿತರಣೆ ನಡೆಯಲಿದೆ. ಏ.7ರಂದು ಸಂಜೆ 3ರಿಂದ ಭಜನೆ, 4.30ರಿಂದ ಶ್ರೀ ಬೀರ್ಣಾಳ್ವ ದೈವ ಹಾಗೂ ಪರಿವಾರ ದೈವಗಳ ನೇಮ ನಡೆಯಲಿದೆ. ಏ.8ರಂದು ಬೆಳಿಗ್ಗೆ 11ರಿಂದ ಶ್ರೀ ದೈವಗಳಿಗೆ ತಂಬಿಲ, ಭಂಡಾರ ಇಳಿಯುವ ಮೂಲಕ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.