ಬದಿಯಡ್ಕ: ಯುಡಿಎಫ್ ಕಾಸರಗೋಡು ಚುನಾವಣಾ ಕುಟುಂಬ ಸಂಗಮ ದಿ. ಮಾನ್ಯ ರವೀಂದ್ರ ಮಾಸ್ತರ್ ಅವರ ನಿವಾಸದಲ್ಲಿ ಮಂಗಳವಾರ ನಡೆಯಿತು. ಕುಟುಂಬ ಸಂಗಮವನ್ನು ಕೇರಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಮಲ್ಲಪ್ಪಳ್ಳಿ ರಾಮಚಂದ್ರನ್ ಉದ್ಘಾಟಿಸಿ ಮಾತನಾಡಿ ಐದು ವರ್ಷದಲ್ಲಿ ಆಡಳಿತವು ಎಲ್ಲಾ ರಂಗದಲ್ಲಿ ವಿಫಲವಾಗಿದೆ, ಕೇರಳದಲ್ಲಿ ಐಕ್ಯ ಪ್ರಜಾಪ್ರಭುತ್ವ ರಂಗ ಅಧಿಕಾರಕ್ಕೆ ಬಂದರೆ ತಕ್ಷಣ ಮೆಡಿಕಲ್ ಕಾಲೇಜನ್ನು ಆರಂಭಿಸಲಾಗುವುದು ಎಂದು ಭರವಸೆ ಇತ್ತರು. ಕಾಂಗ್ರೆಸ್ಸಿನ ಚುನಾವಣಾ ಪ್ರಣಾಳಿಕೆ ಜನರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ ಎಂದು ತಿಳಿಸಿದರು.
ಐಕ್ಯ ಪ್ರಜಾಪ್ರಭುತ್ವ ರಂಗದ ಕಾಸರಗೋಡು ಮಂಡಲ ಚುನಾವಣಾ ಅಧ್ಯಕ್ಷ ನ್ಯಾಯವಾದಿ ಗೋವಿಂದ ನಾಯಾರ್ ಅಧ್ಯಕ್ಷತೆ ವಹಿಸಿದ್ದರು. ಐಕ್ಯರಂಗದ ಅಭ್ಯರ್ಥಿ ಎನ್.ಎ.ನೆಲ್ಲಿಕುನ್ನು, ಐಕ್ಯ ಪ್ರಜಾಪ್ರಭುತ್ವ ರಂಗದ ನೇತಾರರಾದ ಹಕೀಮ್ ಕುನ್ನಿಲ್, ಟಿ ಅಬ್ದುಲ್ಲಾ, ಸಿಕೆ ಶ್ರಿಧರನ್, ಸಿಟಿ ಅಹಮ್ಮದಾಲಿ, ಪಿಜಿ ಚಂದ್ರಹಾಸ ರೈ, ಮಾಹಿನ್ ಕೇಳೊಟ್, ನಾರಾಯಣ ಮಣಿಯಾಣಿ, ಶ್ಯಾಂಪ್ರಸಾದ್ ಮಾನ್ಯ, ಜನಪ್ರತಿನಿಧಿ ಅನಸೂಯಾ ಮಾನ್ಯ ಮಾತನಾಡಿದರು. ನೂರಾರು ಸಂಖ್ಯೆಯಲ್ಲಿ ಐಕ್ಯ ಪ್ರಜಾಪ್ರಭುತ್ವ ರಂಗದ ಕಾರ್ಯಕರ್ತರು ಕುಟುಂಬ ಸಂಗಮದಲ್ಲಿ ಭಾಗವಹಿಸಿದರು.