ಬದಿಯಡ್ಕ: ವಾಂತಿಚ್ಚಾಲ್ ಉಪ್ಲೇರಿ ಶ್ರೀಮಂತ್ರಮೂರ್ತಿ ಗುಳಿಗ ಸನ್ನಿಧಿಯಲ್ಲಿ ನಾಳೆ(ಏ.1) ದ್ವಾದಶ ವರ್ಷಗಳಿಗೊಮ್ಮೆ ನಡೆಯುವ ಪುನಃ ಪ್ರತಿಷ್ಠಾ ಉತ್ಸವ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 6ಕ್ಕೆ ದೀಪ ಪ್ರತಿಷ್ಠೆ, ಸಾಮೂಹಿಕ ಪ್ರಾರ್ಥನೆ, 7ಕ್ಕೆ ಚತುರ್ವಿಂಶತಿ ನಾಳೀಕೇರ ಅಷ್ಟದ್ರವ್ಯ ಮಹಾಗಣಪತಿ ಯಾಗ ವೀರ ವೆಂಕಟ ಭಟ್ ಕಟ್ಟತ್ತಡ್ಕ ಅವರ ನೇತೃತ್ವದಲ್ಲಿ ನಡೆಯಲಿದೆ. 10ಕ್ಕೆ ಪೂರ್ಣಾಹುತಿ, ಪ್ರಸಾದ ವಿತರಣೆ,10.30ಕ್ಕೆ ಮಂತ್ರಮೂರ್ತಿ ಗುಳಿಗ ದೈವಕ್ಕೆ ಸಾನ್ನಿಧ್ಯ ನವಕ ಕಲಶಾಭಿಷೇಕ, 10.45ಕ್ಕೆ ಸೀಯಾಳಾಭಿಷೇಕ, ಕ್ಷೀರಾಭಿಷೇಕ, 11ಕ್ಕೆ ವಿಶೇಷ ಪುಷ್ಪಾಲಕಾರ, ತಂಬಿಲ ಸೇವೆ,11.30ಕ್ಕೆ ಪ್ರತಿಷ್ಠಾ ತಂಬಿಲ ಸೇವೆ, ಮಧ್ಯಾಹ್ನ 1.30ಕ್ಕೆ ಪ್ರಸಾದ ಭೋಜನ ನಡೆಯಲಿದೆ.