ಕಾಸರಗೋಡು: ಮಂಜೇಶ್ವರ ಶಾಸಕ ಎಂ.ಸಿ ಕಮರುದ್ದೀನ್ ಆರೋಪಿಯಾಗಿರುವ ಫ್ಯಾಶನ್ಗೋಲ್ಡ್ ವಂಚನಾ ಪ್ರಕರಣದ ಒಂದನೇ ಆರೋಪಿ ಪೂಕೋಯ ತಙಳ್ನನ್ನು ಬಂಧನ ವಿಳಂಬ ಖಂಡಿಸಿ ಪೂಕೋಯ ತಙಳ್ನ ಚಂದೇರದಲ್ಲಿರುವ ಆತನ ವಸತಿ ಎದುರು ಠೇವಣಿಹೊಂದಿರುವ ಮಹಿಳೆಯರು ಧರಣಿ ಸತ್ಯಾಗ್ರಹ ನಡೆಸಿದರು.
ಪ್ರತಿಭಟನಾಕಾರರು ಮೆರವಣಿಗೆ ಮೂಲಕ ಮನೆ ಕಡೆ ಸಆಗುತ್ತಿದ್ದಂತೆ ಹಾದಿಮಧ್ಯೆ ಪೊಲೀಸರು ತಡೆದರೂ ಲೆಕ್ಕಿಸದೆ ಹಾದಿಮಧ್ಯೆ ತಮ್ಮ ಪ್ರತಿಭಟನೆ ಮುಂದುವರಿಸಿದರು. ಫ್ಯಾಶನ್ಗೋಲ್ಡ್ನಲ್ಲಿ ನೂರಾರು ಮಂದಿ ಠೇವಣಿಯಿರಿಸಿದ್ದು, ಹಣಕಳೆದುಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಶಾಸಕ ಎಂ.ಸಿ ಕಮರುದ್ದೀನ್ ಬಂಧನವಾಗಿದ್ದರೂ, ನಂತರ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರು. ಪೂಕೋಯ ತಙಳ್ ಬಂಧನಕ್ಕೆ ವಿಳಂಬ ಧೋರಣೆ ಅನುಸರಿಸುತ್ತಿರುವ ಪೊಲೀಸರ ಕ್ರಮವನ್ನೂ ಪ್ರತಿಭಟನಾಕಾರರು ಖಂಡಿಸಿದರು.