ಕಾಸರಗೋಡು: ಕರ್ನಾಟಕ ಸರ್ಕಾರದಿಂದ ನೇಮಿಸಲ್ಪಟ್ಟಿರುವ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ನ ಚುನಾವಣಾಧಿಕಾರಿ ಎಂ ಗಂಗಾಧರ ಸ್ವಾಮಿ ಐ.ಎ.ಎಸ್ ಅವರು ಕೇರಳ ಗಡಿನಾಡ ಘಟಕದ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಪ್ರಸಕ್ತ ಮತದಾರರ ಪಟ್ಟಿ ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಕಚೇರಿಯಲ್ಲಿ ಮತದರರಿಗೆ ಲಭ್ಯವಿರಲಿದೆ. ಆಸಕ್ತ ಮತದಾರರು ರಜಾದಿನಗಳನ್ನು ಹೊರತುಪಡಿಸಿಹೊರತುಪಡಿಸಿ ಬೆಳಗ್ಗೆ 10ರಿಂದ ಮಧ್ಯಾಹ್ನ 1ರ ವರೆಗೆ ಕಚೇರಿಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.