HEALTH TIPS

ರಾಜ್ಯದಲ್ಲಿ ಭರವಸೆಯ ಕಿರಣ: ಕೋವಿಡ್ ಹರಡುವಿಕೆಯಲ್ಲಿ ಕುಸಿತ: ಇಂದು 12,300 ಮಂದಿಗೆ ಸೋಂಕು ಪತ್ತೆ: 28,867 ಮಂದಿ ಚೇತರಿಕೆ: ಪರೀಕ್ಷಾ ಸಕಾರಾತ್ಮಕತೆ ದರ ಶೇ.13.77

              ತಿರುವನಂತಪುರ: ರಾಜ್ಯದಲ್ಲಿ ಇಂದು ಕೋವಿಡ್ ಬಾಧಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡು ಭರವಸೆಯ ಕಿರಣಕ್ಕೆ ಕಾರಣವಾಗಿದೆ. ಇಂದು ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಾಗಿ 12,300 ಮಂದಿ ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ತಿರುವನಂತಪುರ 1750, ಮಲಪ್ಪುರಂ 1689, ಪಾಲಕ್ಕಾಡ್ 1300, ಎರ್ನಾಕುಳಂ 1247, ಕೊಲ್ಲಂ 1200, ತ್ರಿಶೂರ್ 1055, ಆಲಪ್ಪುಳ 1016, ಕೋಝಿ ಕ್ಕೋಡ್ 857, ಕೊಟ್ಟಾಯಂ 577, ಕಣ್ಣೂರು 558, ಕಾಸರಗೋಡು 341, ಪತ್ತನಂತಿಟ್ಟು 277, ಇಡುಕ್ಕಿ 263, ವಯನಾಡ್ 170 ಎಂಬಂತೆ ಸೋಂಕು ದೃಢಪಡಿಸಲಾಗಿದೆ. 


                   ಕಳೆದ 24 ಗಂಟೆಗಳಲ್ಲಿ 89,345 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ ಶೇ.13.77 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,97,95,928 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.

              ಕಳೆದ 24 ಗಂಟೆಗಳಲ್ಲಿ ಯುಕೆ, ದಕ್ಷಿಣ ಆಫ್ರಿಕಾ, ಬ್ರೆಜಿಲ್ ನಿಂದ ಆಗಮಿಸಿದ ಯಾರಿಗೂ ಸೋಂಕು ದೃಢಪಟ್ಟಿಲ್ಲ. ಯುಕೆ (116), ದಕ್ಷಿಣ ಆಫ್ರಿಕಾ (9) ಮತ್ತು ಬ್ರೆಜಿಲ್ (1) ಎಂಬಂತೆ ಒಟ್ಟು  126 ಜನರಿಗೆ  ಈವರೆಗೆ ಸೋಂಕು ದೃಢಪಡಿಸಲಾಗಿತ್ತು. ಈ ಪೈಕಿ 125 ಮಂದಿಗೆ ಈಗಾಗಲೇ ನೆಗೆಟಿವ್ ಆಗಿದೆ. ಒಟ್ಟು 11 ಜನರಿಗೆ ಜೆನೆಟಿಕ್ ಮಾರ್ಪಡಿಸಿದ ವೈರಸ್ ಇರುವುದು ಪತ್ತೆಯಾಗಿದೆ.

               ಇಂದು, ಕೋವಿಡ್ ಬಾಧಿಸಿ 174 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಕೋವಿಡ್ ಬಾಧಿಸಿ ಮೃತಪಟ್ಟವರ ಸಂಖ್ಯೆ  8815 ಕ್ಕೆ ಏರಿಕೆಯಾಗಿದೆ. 

             ಇಂದು, ಸೋಂಕು ಪತ್ತೆಯಾದವರಲ್ಲಿ 69 ಮಂದಿ ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 11,422 ಮಂದಿ ಜನರಿಗೆ ಸೋಂಕು ತಗುಲಿತು. 753 ಮಂದಿಯ ಸಂಪರ್ಕ ಮೂಲಗಳು ಸ್ಪಷ್ಟವಾಗಿಲ್ಲ. ತಿರುವನಂತಪುರ 1652, ಮಲಪ್ಪುರಂ 1648, ಪಾಲಕ್ಕಾಡ್ 818, ಎರ್ನಾಕುಳಂ 1214, ಕೊಲ್ಲಂ 1189, ತ್ರಿಶೂರ್ 1045, ಆಲಪ್ಪುಳ  1012, ಕೋಝಿಕ್ಕೋಡ್ 832, ಕೊಟ್ಟಾಯಂ 526, ಕಣ್ಣೂರು 506, ಕಾಸರಗೋಡು 327, ಪತ್ತನಂತಿಟ್ಟು 265, ಇಡುಕ್ಕಿ 244, ವಯನಾಡ್ 144 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ. 

            ಇಂದು 56 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿರುವುದು ದೃಢಪಡಿಸಲಾಗಿದೆ.  ಕಾಸರಗೋಡು 10, ಕಣ್ಣೂರು 8, ಕೊಲ್ಲಂ 7, ತಿರುವನಂತಪುರ 6, ಪತ್ತನಂತಿಟ್ಟು, ಎರ್ನಾಕುಳಂ, ತ್ರಿಶೂರ್ 5, ವಯನಾಡ್ 4, ಪಾಲಕ್ಕಾಡ್ 3, ಇಡುಕ್ಕಿ 2 ಮತ್ತು ಕೋಝಿಕೋಡ್ 1 ಎಂಬಂತೆ ಸೋಂಕು ಕಂಡುಬಂದಿದೆ. 

              ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 28,867 ಮಂದಿ ಜನರನ್ನು ಗುಣಪಡಿಸಲಾಗಿದೆ. ತಿರುವನಂತಪುರ 2924, ಕೊಲ್ಲಂ 2437, ಪತ್ತನಂತಿಟ್ಟು 1094, ಆಲಪ್ಪುಳ 2094, ಕೊಟ್ಟಾಯಂ 1635, ಇಡುಕ್ಕಿ 1308, ಎರ್ನಾಕುಳಂ 4003, ತ್ರಿಶೂರ್ 2437, ಪಾಲಕ್ಕಾಡ್ 2584, ಮಲಪ್ಪುರಂ 3508, ಕೋಝಿಕ್ಕೋಡ್ 2210, ವಯನಾಡ್  440, ಕಣ್ಣೂರು 1518, ಕಾಸರಗೋಡು 675 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 2,06,982 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 23,10,385 ಮಂದಿ ಈವರೆಗೆ ಕೋವಿಡ್‍ನಿಂದ ಮುಕ್ತರಾಗಿದ್ದಾರೆ.

            ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 7,88,202 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 7,49,825 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 38,377 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 2,881 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

                 ಇಂದು ಹೊಸ ಹಾಟ್‍ಸ್ಪಾಟ್ ಗಳಿಲ್ಲ. 2 ಪ್ರದೇಶಗಳನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಪ್ರಸ್ತುತ ಒಟ್ಟು 885 ಹಾಟ್‍ಸ್ಪಾಟ್‍ಗಳಿವೆ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries