ಉಪ್ಪಳ: ಜಿಲ್ಲೆಯಲ್ಲಿ ಕೋವಿಡ್ ಚಿಕಿತ್ಸೆಯ ಅಸಮರ್ಪಕತೆಗಳನ್ನು ಪರಿಶೀಲಿಸಲು ಹೈಕೋರ್ಟ್ ನೇಮಿಸಿದ ಸತ್ಯ ಶೋಧನಾ ತಂಡವು ಮಂಗಲ್ಪಾಡಿ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿತು.
ಆರೋಗ್ಯ ಕ್ಷೇತ್ರದಲ್ಲಿ ಜಿಲ್ಲೆಯ ಅವಗಣನೆಯನ್ನು ಉಲ್ಲೇಖಿಸಿ ವೆಲ್ಪೇರ್ ಪಕ್ಷದ ಯುವಜನ ಸಮಿತಿ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿತ್ತು. ಜಿಲ್ಲೆಯಲ್ಲಿ ಕೋವಿಡ್ ಚಿಕಿತ್ಸೆಯ ಅಸಮರ್ಪಕತೆಗಳನ್ನು ಪರಿಶೀಲಿಸಲು ಹೈಕೋರ್ಟ್ ಅರ್ಜಿ ಪರಿಶೀಲಿಸಿ ಸತ್ಯ ಶೋಧನಾ ತಂಡವನ್ನು ನೇಮಿಸಿತ್ತು. ಜಿಲ್ಲಾ ಸೆಷನ್ಸ್ ನ್ಯಾಯಾಧೀಶರ ನೇತೃತ್ವದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರು ತನಿಖೆ ನಡೆಸಲು ಆಗಮಿಸಿದರು. ನ್ಯಾಯಾಧೀಶರು ಕಾಸರಗೋಡು ವೈದ್ಯಕೀಯ ಕಾಲೇಜು ಮತ್ತು ಟಾಟಾ ಆಸ್ಪತ್ರೆಯಂತಹ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಭೇಟಿ ಮೂರು ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಈ ಸಂದರ್ಭದಲ್ಲಿ ವೆಲ್ಪೇರ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಶಾಹಿದಾ ಇಲ್ಯಾಸ್, ಮಂಜೇಶ್ವರ ಕ್ಷೇತ್ರದ ಅಧ್ಯಕ್ಷ ಅಬ್ದುಲ್ಲ ಲತೀಫ್ ಕುಂಬಳೆ ಮತ್ತು ಕ್ಷೇತ್ರ ಕಾರ್ಯದರ್ಶಿ ಹಮೀದ್ ಅಂಬಾರ್ ಉಪಸ್ಥಿತರಿದ್ದರು.