HEALTH TIPS

ಎಡನೀರು ಶ್ರೀಗಳ ಚಾತುರ್ಮಾಸ್ಯ ಜುಲೈ 13ರಿಂದ ಸೆಪ್ಟೆಂಬರ್ 10 ರತನಕ: ನಿರ್ವಹಣಾ ಸಮಿತಿ ರಚನೆ

                    ಕಾಸರಗೋಡು: ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ದ್ವಿತೀಯ ಚಾತುರ್ಮಾಸ್ಯ ವೃತಾಚರಣೆಯ ಜುಲೈ 13 ರಿಂದ ಸೆಪ್ಟೆಂಬರ್ 10 ತನಕ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಎಡನೀರು ಶ್ರೀ ಮಠದಲ್ಲಿ ಜರಗಲಿದೆ. 

          ವ್ರತಾಚರಣೆಯ ಯಶಸ್ವಿಗಾಗಿ ಊರ-ಪರವೂರ ಭಕ್ತಾದಿಗಳ ಸಭೆ ಭಾನುವಾರ ಎಡನೀರು ಶ್ರೀ ಮಠದಲ್ಲಿ ಜರಗಿತು. ಡಾ. ಟಿ. ಶಾಮ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಸಚ್ಚಿದಾನಂದಭಾರತೀ ಶ್ರೀಪಾದರು ಆಶೀರ್ವಚನ ನೀಡಿದರು. ಧಾರ್ಮಿಕ ಮುಂದಾಳು, ಸಂಘಟಕ ಕೆಯ್ಯೂರು ನಾರಾಯಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಬಿ.ಎಸ್. ರಾವ್,  ಗೋಪಾಲಕೃಷ್ಣ ಅಡಿಗ, ನ್ಯಾಯವಾದಿ ಎಂ.ನಾರಾಯಣಭಟ್, ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್, ಅರವಿಂದ ಅಲೆವೂರಾಯ, ಕಾಸರಗೋಡು ಚಿನ್ನ, ಭಾಸ್ಕರ ಬಾರ್ಯ ಪುತ್ತೂರು, ಪ್ರೊ.ಎ.ಶ್ರೀನಾಥ್ ಕಾಸರಗೋಡು, ಶ್ರೀಕರ ಭಟ್, ಕೆ.ಮಾಧವ ಹೇರಳ ಮೊದಲಾದವರು ಮಾತನಾಡಿದರು. ವಿದ್ವಾನ್ ಯೋಗೀಶ್ ಶರ್ಮ ಬಳ್ಳಪದವು ಪ್ರಾರ್ಥನೆ ಹಾಡಿದರು. ಶ್ರೀಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ ಸ್ವಾಗತಿಸಿ, ವೇಣು ಮಾಸ್ತರ್ ಎಡನೀರು ವಂದಿಸಿದರು. ಸೂರ್ಯ ಭಟ್ ಎಡನೀರು ಕಾರ್ಯಕ್ರಮ ನಿರೂಪಿಸಿದರು.

               ಚಾತುರ್ಮಾಸ್ಯ ನಿರ್ವಹಣೆಗೆ ಸಮಿತಿ ರೂಪಿಸಲಾಯಿತು. ಅಧ್ಯಕ್ಷರು:ಡಾ. ಟಿ ಶಾಮ್ ಭಟ್, ಕಾರ್ಯದರ್ಶಿ: ಕೆಯ್ಯೂರು ನಾರಾಯಣ ಭಟ್, ಖಜಾಂಚಿಗಳು ವೆಂಕಟ ಭಟ್ ಎಡನೀರು. ಸತೀಶ್ ರಾವ್ ಎಡನೀರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries