HEALTH TIPS

ಕುತ್ಯಾಳ ಶ್ರೀಗೋಪಾಲಕೃಷ್ಣ ದೇವಸ್ಥಾನದಲ್ಲಿ 18ನೇ ವಾರದ ಭಜನಾ ಅಭಿಯಾನ

            ಮಧೂರು: ಧರ್ಮಸ್ಥಳ ಶ್ರೀಮಂಜುನಾಥೇಶ್ವರ ಭಜನಾ ಪರಿಷತ್  ಇದರ ಸಹಯೋಗದಲ್ಲಿ ರಾಜರ್ಷಿ ಡಾ.  ಡಿ ವೀರೇಂದ್ರ ಹೆಗ್ಗೆಡೆ ಹಾಗೂ ಮಾತಾಜಿಯವರ ಆಶೀರ್ವಾದದಿಂದ ಆರಂಭವಾದ ಭಜನಾ ಅಭಿಮಾನ-ಅಭಿಯಾನ ವಾರದ 18ನೇ ಕಾರ್ಯಕ್ರಮ ಕಾಸರಗೋಡಿನ ಕುತ್ಯಾಳ ಶ್ರೀಗೋಪಾಲಕೃಷ್ಣ ದೇವಸ್ಥಾನದಲ್ಲಿ  ಜರಗಿತು. 


                 ಧಾರ್ಮಿಕ ಮುಂದಾಳು, ಭಜನಾ ಪರಿಷತ್ ಕಾಸರಗೋಡು ವಲಯಾಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ ಕಾಸರಗೋಡು ಸಭೆಯ ಅಧ್ಯಕ್ಷತೆ ವಹಿಸಿದ್ದರು.ವೈದಿಕ ಶಿರೋಮಣಿ ನಾಗೇಂದ್ರ ಭಟ್ ಕೂಡ್ಲು ಧಾರ್ಮಿಕ ಉಪನ್ಯಾಸಗೈದರು. ಭಜನಾ ಅಭಿಯಾನದ ಗೌರವಾಧ್ಯಕ್ಷ ಹರಿದಾಸ 

ಜಯಾನಂದ ಕುಮಾರ್  ಹೊಸದುರ್ಗ ಉಪಸ್ಥಿತರಿದ್ದರು.


             ಈ ಸಂದರ್ಭದಲ್ಲಿ ಕುತ್ಯಾಳ ಕ್ಷೇತ್ರ ಆಡಳಿತ ಮೋಕ್ತೆಸರ  ಕೆ.ಜಿ.ಶ್ಯಾನ್‍ಭೋಗ್ ದಂಪತಿಗಳನ್ನು   ಸನ್ಮಾನಿಸಲಾಯಿತು. ರೋಹಿತ್ ಕೊಲ್ಯ ಸ್ವಾಗತಿಸಿ, ಮೀರಾ ಹರೀಶ್ ಗಟ್ಟಿ ಉಳಿಯ ವಂದಿಸಿದರು. ಪೇಟೆ ವೆಂಕಟ್ರಮಣ ಮಹಿಳಾ ಭಜನಾ ತಂಡ ಹಾಗೂ ಶ್ರೀಶಕ್ತಿ ಬಾಲವೃಂದ ಉಳಿಯತ್ತಡ್ಕ, ಮುತ್ತಪ್ಪ ಮಹಿಳಾ ಭಕ್ತ ವೃಂದ ಪಾರೆಕಟ್ಟೆ ಇವರು ಭಜನಾ ಸೇವೆ ನಡೆಸಿದರು. ಧ್ರುವ ಆಚಾರ್ಯ ಹಾರ್ಮೋನಿಯಂ ಹಾಗೂ. ಅಚ್ಚುತ ಕೂಡ್ಲು ತಬಲದಲ್ಲಿ ಸಹಕರಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries