HEALTH TIPS

ಗ್ರಾಮೀಣ ಪ್ರದೇಶದಲ್ಲಿ ಕಲಾವಿದರನ್ನು ಬೆಳೆಸಬೇಕು : ತಿಮ್ಮಪ್ಪ ಭಂಡಾರಿ ಬೊಳುವಾಯಿ

             ಉಪ್ಪಳ: ಗ್ರಾಮೀಣ ಪ್ರದೇಶದಲ್ಲಿ ಕಲಾವಿದರನ್ನು ಬೆಳೆಸುವುದರಿಂದ ಜನರಲ್ಲಿ ಒಗ್ಗಟ್ಟು ಹೆಚ್ಚಾಗುತ್ತದೆ. ಜತೆಗೆ ಗ್ರಾಮೀಣ ಪ್ರೇಕ್ಷಕರು ಮೆಚ್ಚುಗೆ  ವ್ಯಕ್ತಪಡಿಸುತ್ತಾರೆ ಎಂದು ಪ್ರಗತಿಪರ ಕೃಷಿಕ,ಯಕ್ಷಗಾನ ಕಲಾವಿದ ತಿಮ್ಮಪ್ಪ ಭಂಡಾರಿ ಬೊಳುವಾಯಿ ಅಭಿಪ್ರಾಯಪಟ್ಟರು. 

           ಭಾನುವಾರ ಬೇಕೂರು ಸುಭಾಷ್ ನಗರದಲ್ಲಿರುವ ರಾಯಲ್ ಹಾಲ್ ನಲ್ಲಿ ಸವಾಕ್ ಮಂಜೇಶ್ವರ ವಲಯದ 'ಕಲೋತ್ಸವ 2022' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

                   ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷೆ  ಜೀನ್ ಲವೀನ ಮೊಂತೇರೊ ರವರ ಅಧ್ಯಕ್ಷತೆಯಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಮಂಗಲ್ಪಾಡಿ ಗ್ರಾಮ ಪಂಚಾಯತಿ ಸದಸ್ಯೆ ಸುಜಾತ ಯು. ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಕೇರಳ ರಾಜ್ಯ ಸಮಿತಿಗೆ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಉಮೇಶ್ ಎಂ. ಸಾಲಿಯಾನ್ ರಿಗೆ ಗೌರವಾರ್ಪಣೆ ನಡೆಯಿತು. ಸವಾಕ್ ಜಿಲ್ಲಾ ಕೋಶಾಧಿಕಾರಿ  ಚಂದ್ರಹಾಸ ಕಯ್ಯಾರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸವಾಕ್ ಮಂಜೇಶ್ವರ ವಲಯದ ಕಾರ್ಯದರ್ಶಿ ದಾಮೋದರ ಬೊಳ್ಳಾರ್ ಸ್ವಾಗತಿಸಿ, ರವೀಂದ್ರ ಶೆಟ್ಟಿ ಬೊಳ್ಳಾರ್ ವಂದಿಸಿದರು.  ಸವಾಕ್ ರಾಜ್ಯ ಸಮಿತಿಯ ಸದಸ್ಯರಾದ  ಭಾರತೀ ಬಾಬು, ರಾಜೇಶ್ ಯನ್,ಸವಾಕ್ ಜಿಲ್ಲಾ ಸಮಿತಿಯ ಸದಸ್ಯ  ವಾಸು ಬಾಯಾರು,ನರಸಿಂಹ ಬಲ್ಲಾಳ್ ಹಾಗೂ  ಜಿಲ್ಲಾ ಉಪಾಧ್ಯಕ್ಷ ದಿವಾಕರ್ ಪಿ. ಉಪಸ್ಥಿತರಿದ್ದರು. ಬಳಿಕ ಕಲೋತ್ಸವದ ಅಂಗವಾಗಿ ಸುಗಮ ಸಂಗೀತ, ಜಾನಪದ ಗೀತೆ, ಸಿನಿಮಾಟಿಕ್ ನೃತ್ಯ, ಭರತನಾಟ್ಯ ಸ್ಪರ್ಧೆಗಳು ನಡೆಯಿತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries