HEALTH TIPS

ಚಿನ್ನ ಕಳ್ಳಸಾಗಣೆ ಪ್ರಕರಣ; ಜಾರಿ ನಿರ್ದೇಶನಾಲಯಕ್ಕೆ ಗೌಪ್ಯ ಹೇಳಿಕೆ ಪ್ರತಿ ಹಸ್ತಾಂತರ: ವಿಶೇಷ ನ್ಯಾಯಾಲಯದ ನಿರ್ದೇಶನದಂತೆ ಕ್ರಮ

                  ತಿರುವನಂತಪುರ: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸಪ್ನಾ ಸುರೇಶ್ ಕಸ್ಟಮ್ಸ್‍ಗೆ ನೀಡಿರುವ ಗೌಪ್ಯ ಹೇಳಿಕೆಯ ಪ್ರತಿಯನ್ನು ಜಾರಿ ನಿರ್ದೇಶನಾಲಯಕ್ಕೆ ಹಸ್ತಾಂತರಿಸಲಾಗಿದೆ. ಸ್ವಪ್ನಾ ಮತ್ತು ಸರಿತ್ ಅವರು ಕಸ್ಟಮ್ಸ್‍ಗೆ ನೀಡಿದ ಹೇಳಿಕೆಯನ್ನು ಇಡಿ ಸ್ವೀಕರಿಸಿದೆ. ಇಡಿ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿದ ನಂತರ ಆರ್ಥಿಕ ಅಪರಾಧಗಳನ್ನು ಪರಿಗಣಿಸುತ್ತಿರುವ ಕೊಚ್ಚಿಯ ವಿಶೇಷ ನ್ಯಾಯಾಲಯವು ಪ್ರತಿಯನ್ನು ಇಡಿಗೆ ಹಸ್ತಾಂತರಿಸಿದೆ.

                     ಇದೇ ವೇಳೆ ಡಾಲರ್ ಕಳ್ಳಸಾಗಣೆ ಪ್ರಕರಣದಲ್ಲಿ ತಪೆÇ್ಪಪ್ಪಿಗೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಇದೇ 22ಕ್ಕೆ ಮುಂದೂಡಲಾಗಿದೆ. ಕಸ್ಟಮ್ಸ್ ವಕೀಲರ ವಾದವನ್ನೂ ಆಲಿಸಬೇಕು ಎಂದು ತಿಳಿಸಿದ ನ್ಯಾಯಾಲಯ ಅರ್ಜಿಯ ಪರಿಗಣನೆಯನ್ನು ಮುಂದೂಡಿತು. 2020ರಲ್ಲಿ ಚಿನ್ನದ ಕಳ್ಳಸಾಗಣೆ ಪ್ರಕರಣ ಮತ್ತು ಡಾಲರ್ ಕಳ್ಳಸಾಗಣೆ ಪ್ರಕರಣದಲ್ಲಿ ಸ್ವಪ್ನಾ ಕಸ್ಟಮ್ಸ್‍ಗೆ ರಹಸ್ಯ ಹೇಳಿಕೆ ನೀಡಿದ್ದಳು. 

                   ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಪಿ ಶ್ರೀರಾಮಕೃಷ್ಣನ್ ವಿರುದ್ಧ ಉಲ್ಲೇಖಗಳಿವೆ ಎಂದು ಕಸ್ಟಮ್ಸ್ ಕಮಿಷನರ್ ಆಗಿದ್ದ ಸುಮಿತ್ ಕುಮಾರ್ ಅವರು ಹೈಕೋರ್ಟ್‍ನಲ್ಲಿ ಅಫಿಡವಿಟ್‍ನಲ್ಲಿ ತಿಳಿಸಿದ್ದರು. ಗೌಪ್ಯ ಹೇಳಿಕೆಯ ಪ್ರತಿಯನ್ನು ಕೋರಿ ಇಡಿ ಈ ಹಿಂದೆ ನ್ಯಾಯಾಲಯವನ್ನು ಸಂಪರ್ಕಿಸಿತ್ತು. ಆದರೆ ಕಸ್ಟಮ್ಸ್‍ನ ಆಕ್ಷೇಪದ ಹಿನ್ನೆಲೆಯಲ್ಲಿ ಅರ್ಜಿಗಳನ್ನು ತಿರಸ್ಕರಿಸಲಾಗಿತ್ತು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries