ಉಪ್ಪಳ: ಕೊಂಡೆವೂರು ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠ ವಿದ್ಯಾಸಂಸ್ಥೆಯಲ್ಲಿ ಜುಲೈ 30 ರಂದು ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಸಲುವಾಗಿ ಮಂಜೇಶ್ವರ ಉಪಜಿಲ್ಲಾ ಮಟ್ಟದ ವಿವಿಧಶಾಲೆಗಳ ಸಾಂಸ್ಕೃತಿಕ ಸ್ಪರ್ಧೆಗಳು ಜರಗಲಿದೆ.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಕೊಂಡೆವೂರು ಶ್ರೀಗಳಾದ ಶ್ರೀ ಯೋಗಾನಂದಸರಸ್ಡತೀ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಕಾಂಞಂಗಾಡು ವಿದ್ಯಾಭ್ಯಾಸ ಜಿಲ್ಲಾ ವಿದ್ಯಾಧಿಕಾರಿ ನಂದಿಕೇಶನ್ ಉದ್ಘಾಟಿsಸುವರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಾಮಚಂದ್ರ ಸಿ ಅಧ್ಯಕ್ಷತೆ ವಹಿಸಲಿದ್ದು ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ಶಶಿಧರ ಶೆಟ್ಟಿ ಗ್ರಾಮ ಚಾವಡಿ , ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಉತ್ತಮ ಶಿಕ್ಷಕರಿಗಿರುವ ರಾಜ್ಯ ಪ್ರಶಸ್ತಿ ಪುರಸ್ಕೃತೆ ನಿವೃತ್ತ ಮುಖ್ಯ ಶಿಕ್ಷಕಿ ಶಾರದಾ ಗುರುವಂದನೆ ನಡೆಸಲಿದ್ದಾರೆ. ಶಾಲಾ ಪ್ರಾಂಶುಪಾಲ ಪ್ರವೀದ್ ಪಿ, ಎಸ್ ಎಂ ಸಿ ಜೊತೆ ಕಾರ್ಯದರ್ಶಿ ಚಂದ್ರಹಾಸ ಪಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ತಾರಾನಾಥ ಶುಭಾಶಂಸನೆ ಗೈಯ್ಯುವರು. ಸಮಾರೋಪ ಸಮಾರಂಭವನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ವಿ ದಿನೇಶ್ ಉದ್ಘಾಟಿಸಲಿದ್ದು, ಬಹುಮಾನ ವಿತರಿಸಲಿದ್ದಾರೆ. ಎಂ ಪಿ ಟಿ ಎ ಅಧ್ಯಕ್ಷೆ ಜಯಶೀಲಾ ಅಧ್ಯಕ್ಷತೆ ವಹಿಸಲಿದ್ದು , ಜಗದ್ಗುರು ಶ್ರೀ ನಿತ್ಯಾನಂದ ಮಹಾ ಪೀಠ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ಪಿ ಆರ್ ಶೆಟ್ಟಿ ಪೆÇಯ್ಯೆಲು ಕುಳೂರು, ಶಿಶುವಾಟಿಕಾ ಅಧ್ಯಕ್ಷೆ ಆಶ್ರಿತಾ ಶೆಟ್ಟಿ ಶುಭಾಶಂಸನೆ ಗೈಯ್ಯುವರು. ಎಸ್ ಎಂ ಸಿ ಕಾರ್ಯದರ್ಶಿ ಜಯಶೀಲಾ, ಸಂಯೋಜಕಿ ರೇಖಾ ಪ್ರದೀಪ ಉಪಸ್ಥಿತರಿರುವರು.
ಜು.30. ಕೊಂಡೆವೂರು ವಿದ್ಯಾಪೀಠದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ: ಉಪಜಿಲ್ಲಾ ಮಟ್ಟದ ಸಾಂಸ್ಕøತಿಕ ಸ್ಪರ್ಧಾ ಕಾರ್ಯಕ್ರಮ
0
July 28, 2022
Tags