HEALTH TIPS

ಹಿರಿಯ ನಾಗರಿಕರ ವೇದಿಕೆಯಿಂದ ರಾಮಾಯಣ ಮಾಸಾಚರಣೆ


             ಬದಿಯಡ್ಕ: ನಿತ್ಯಜೀವನದಲ್ಲಿ ರಾಮಾಯಣದ ತತ್ವಗಳ ಆಚರಣೆಯಿಂದ ಸಮಾಜದಲ್ಲಿ
ಶಾಂತಿ ಮತ್ತು ಸುಭಿಕ್ಷೆ ನೆಲೆಸಲು ಸಾಧ್ಯ ಎಂದು ನಿವೃತ್ತ ಅಧ್ಯಾಪಕ ಪೆರ್ಮುಖ ಈಶ್ವರ ಭಟ್ ನುಡಿದರು.
         ಅವರು ಬದಿಯಡ್ಕ ಪಂಚಾಯಿತಿ ವಯೋಜನರ ಹಗಲು ಮನೆಯಲ್ಲಿ ಕೇರಳ ಹಿರಿಯ ನಾಗರಿಕರ ವೇದಿಕೆಯ ಆಶ್ರಯದಲ್ಲಿ ರಾಮಾಯಣ ಮಾಸಾಚರಣೆ ಅಂಗವಾಗಿ ಜರುಗಿದ ಪುರಾಣ ವಾಚನ ಮತ್ತು ಪ್ರವಚನ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದರು.
       ರಾಮಾಯಣದ ವಿಭೀಷಣ ನೀತಿ ಎಂಬ ಕಥಾ ಭಾಗವನ್ನಾರಿಸಿ ಭಾಗವತ ಬೆಂದ್ರೋಡ್ ಗೋವಿಂದ ಭಟ್ಟರು ಹಾಡುಗಾರಿಕೆಯನ್ನು, ನಿವೃತ್ತ ಪ್ರಾಂಶುಪಾಲ ಡಾ.ಬೇ.ಸೀ.ಗೋಪಾಲಕೃಷ್ಣ ಭಟ್ಟರು ಪ್ರವಚನವನ್ನೂ ನಡೆಸಿದರು. ಬೆಂಗ್ರೋಡ್ ಜನಾರ್ಧನ ಭಟ್ಟರ ಪ್ರಾರ್ಥನೆಯೊಂದಿಗೆ ಕಾರ್ಯುಕ್ರಮವು ಪ್ರಾರಂಭಗೊಂಡಿತು. ನಿಕಟಪೂರ್ವ ಅಧ್ಯಕ್ಷ ಪಿಲಿಂಗಲ್ಲು ಕೃಷ್ಣ ಭಟ್ ಅತಿಥಿಗಳಿಗೆ ಉಡುಗೊರೆಯನ್ನಿತ್ತು ಗೌರವಿಸಿದರು. ವೇದಿಕೆಯ ಅಧ್ಯಕ್ಷ ಈಶ್ವರ ಭಟ್  ಸ್ವಾಗತಿಸಿ, ನಿರೂಪಿಸಿದರು. ಕಾರ್ಯದರ್ಶಿ ಸಂಪತ್ತಿಲ ಶಂಕರನಾರಾಯಣ ಭÀಟ್ ವಂದಿಸಿದರು.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries