ಕಾಸರಗೋಡು: ತುಳು ಭಾಷೆ ಸಂಸ್ಕøತಿ ಅಚಾರ ವಿಚಾರಗಳ ಉಳಿವಿನ ಬಗ್ಗೆ ಶ್ರಮಿಸುತ್ತಿರುವ ಜೈ ತುಳುನಾಡ್ ಸಂಘಟನೆ ವತಿಯಿಂದ ತಯಾರಿಸಲಾದ 'ಗೇನಸಿರಿ'ಎಂಬ ಲಿಪ್ಯಂತರ ತಂತ್ರಾಂಶವನ್ನು ಕಾಸರಗೋಡು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ಚಂದ್ ಸೋಮವಾರ ಬಿಡುಗಡೆಗೊಳಿಸಿದರು.
ಡಿಜಿಟಲ್ ಮಾದ್ಯಮದಲ್ಲಿ ತುಳು ಲಿಪಿಯ ಬಳಕೆಯ ಹೆಚ್ಚಳಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುವ ಸಂಘಟನೆಯು ಈ ಮೊದಲು ತುಳು ಬರವು, ತುಳು ಮಂದಾರ, ಕೊಪ್ಪರಿಗೆ ತುಳು ಡಿಕ್ಷನರಿ ಮುಂತಾದ ಯೋಜನೆಗಳನ್ನು ಸಮರ್ಪಿಸಿದ್ದು ಅತ್ಯುತ್ತಮ ಲಿಪ್ಯಂತರ ತಂತ್ರಾಂಶ ತಯಾರಿಸಿದೆ.
ಜೈ ತುಲುನಾಡ್ (ರಿ.) ಕೇಂದ್ರ ಸಮಿತಿ ಕೇಂದ್ರ ಉಪಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್, ಕೇರಳ ತುಳು ಅಕಾಡಮಿ ಅಧ್ಯಕ್ಷ ಎಂ. ಉಮೇಶ್ ಸಾಲ್ಯಾನ್, ಜೈ ತುಳು ನಾಡ್ ಕಾಸರಗೋಡು ಘಟಕ ಕಾರ್ಯದರ್ಶಿ, ಕೋಶಾಧಿಕಾರಿ ಉತ್ತಮ ಯು, ಶ್ರೀನಿವಾಸ ಆಳ್ವ, ವಿನೋದ ಪ್ರಸಾದ್ ರೈ, ರಾಜಶ್ರೀ ಟಿ ರೈ ಪೆರ್ಲ, ಪ್ರಶಾಂತ್ ನಾಯ್ಕ್, ಕುಶಾಲಾಕ್ಷಿ ವಿ ಕಣ್ವತೀರ್ಥ, ಜ್ಞಾನೇಶ್ ದೇರಳಕಟ್ಟೆ, ಚಿರಶ್ರೀ ದೇರಳಕಟ್ಟೆ, ಕಿರಣ್ ತುಲುವೆ, ಪುರೋಷತ್ತಮ ಎಂ ನಾಯ್ಕ್, ಸನ್ನಿಧಿ ಟಿ ರೈ ಪೆರ್ಲ ಉಪಸ್ಥಿತರಿದ್ದರು.
ಈ ತಂತ್ರಾಂಶವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಂಗೀಕರಿಸಿದ್ದು, ಯುನಿಕೋಡಿಗೆ ಕಳುಹಿಸಲಾದ ತುಲು ಲಿಪಿಯಲ್ಲಿ ತಯಾರಿಸಲಾಗಿದೆ. ಇದರಲ್ಲಿ ತುಳು ಲಿಪಿಯ ವಿಶೇಷ ಅಕ್ಷರಗಳನ್ನೂ ಬಳಸಬಹುದಾಗಿದೆ.