HEALTH TIPS

ಕುಣಿಗಲ್​ನಲ್ಲಿದ್ದ ಸಾವಿರ ವರ್ಷಗಳಷ್ಟು ಹಳೆಯ ದೇಗುಲವೇ ಮಿಸ್ಸಿಂಗ್! ಪುರಾತತ್ವ ಇಲಾಖೆಗೆ ಪತ್ರ ಬರೆದ ಅಧಿಕಾರಿ

             ಚೆನ್ನೈ: ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿ ಚೋಳರು ನಿರ್ಮಿಸಿರುವ ಸುಮಾರು ಒಂದು ಸಾವಿರ ವರ್ಷಗಳಷ್ಟು ಹಳೆಯದಾದ ದೇವಸ್ಥಾನವು ನಾಪತ್ತೆಯಾಗಿಬಿಟ್ಟಿದೆ. ಈ ದೇವಸ್ಥಾನವನ್ನು ಕಳ್ಳತನ ಮಾಡಲಾಗಿದೆ ಎಂಬ ಅಚ್ಚರಿಯ ಸಂಗತಿಯನ್ನು ತಮಿಳುನಾಡು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಹೊರಗೆಡವಿದ್ದಾರೆ.

            ವಿಗ್ರಹ ವಿಭಾಗದ ಮಾಜಿ ಮುಖ್ಯಸ್ಥರಾಗಿದ್ದ ತಮಿಳುನಾಡು ನಿವೃತ್ತ ಪೊಲೀಸ್ ಅಧಿಕಾರಿ ಎ.ಜಿ.ಪೊನ್ ಮಾಣಿಕ್ಕವೇಲ್ ಪುರಾತತ್ವ ಮತ್ತು ಪುರಾತತ್ವ ಇಲಾಖೆಗೆ ಸಂಬಂಧಿಸಿದ ತಮಿಳುನಾಡು ದತ್ತಿ ಸಚಿವರಿಗೆ ಈ ವಿಷಯದ ಕುರಿತು ಪತ್ರ ಬರೆದಿದ್ದು, ಕರ್ನಾಟಕದ ಇಂದಿನ ತುಮಕೂರು ಜಿಲ್ಲೆಯಲ್ಲಿ ಸುಮಾರು ಸಾವಿರ ವರ್ಷಗಳಷ್ಟು ಹಳೆಯದಾದ 'ರಾಜೇಂದ್ರ ಚೋಳೇಶ್ವರಂ' ದೇಗುಲವನ್ನು ಚೋಳರು ನಿರ್ಮಾಣ ಮಾಡಿದ್ದು, ಅದು ಕಾಣೆಯಾಗಿದೆ ಎಂದು ತಿಳಿಸಿದ್ದಾರೆ.               ಪುರಾತತ್ವ, ಹಿಂದೂ ಧಾರ್ಮಿಕ ಮತ್ತು ದತ್ತಿ ಸಚಿವ ತಂಗಂ ತೇನರಸು ಮತ್ತು ಪಿ.ಕೆ. ಸೇಕರ್‌ಬಾಬು ಅವರಿಗೆ ಈ ಪತ್ರವನ್ನು ಪೊನ್​ಮಾಣಿಕ್ಕವೇಲ್​ ಬರೆದಿದ್ದಾರೆ.

                ಕುಣಿಗಲ್‌ನ ಕೊತ್ತಗೆರೆ ಗ್ರಾಮದಲ್ಲಿ ಚೋಳರ ಕಾಲದಲ್ಲಿ ನಿರ್ಮಿಸಲಾದ ಕೆರೆಯು ಇನ್ನೂ ಅಸ್ತಿತ್ವದಲ್ಲಿದೆ. ಕಲ್ಲಿನ ಶಾಸನವು ನಿಖರವಾಗಿ 949 ವರ್ಷಗಳ ಹಿಂದೆ ಅಂದರೆ 1049 ರಲ್ಲಿ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ ಎಂದು ಹೇಳುತ್ತದೆ. ಆದರೆ ದೇವಸ್ಥಾನವು ಇಂದು ಕಾಣುತ್ತಿಲ್ಲ. 1049ಕ್ಕಿಂತ ಮೊದಲ ಕುಲೋತ್ತುಂಗ ಚೋಳ ತೇವರ್ ತಮ್ಮ ತಂದೆಯ ನೆನಪಿಗಾಗಿ ಇದನ್ನು ನಿರ್ಮಾಣ ಮಾಡಿದ್ದರು. ಇದನ್ನು ಕೋಟೆಗಿರಿ ನೀಯಾ ಎಂದು ಕರೆಯಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.

ಗ್ರಾಮದಲ್ಲಿ ಈಗ ಇರುವ ಶಿವ ದೇವಸ್ಥಾನವನ್ನು ಚೋಳರ ಹಳೆಯ ದೇವಸ್ಥಾನದ ಮೇಲೆ ನಿರ್ಮಿಸಿರಬಹುದು ಎಂಬ ಅಂದಾಜು ಇದೆ. ಏಕೆಂದರೆ ಶಿವ ದೇವಸ್ಥಾನದ ಬಳಿ ಪ್ರಾಚೀನ ತಮಿಳು ಅಕ್ಷರಗಳನ್ನು ಒಳಗೊಂಡಿರುವ ಕಲ್ಲಿನ ಶಾಸನವೊಂದು ಕಂಡುಬಂದಿದೆ. ಈ ಬಗ್ಗೆ ಸಂಶೋಧನೆ ಅಗತ್ಯವಿದೆ ಎಂದು ಮಾಣಿಕ್ಕವೆಲ್ ಹೇಳಿದ್ದಾರೆ. ತುಮಕೂರು ಜಿಲ್ಲೆಯ ಕುಣಿಗಲ್ ಅನ್ನು ಈ ಹಿಂದೆ ರಾಜೇಂದ್ರ ಚೋಳಪುರಂ ಎಂದು ಕರೆಯಲಾಗುತ್ತಿತ್ತು ಎಂದು ಈ ಶಾಸನವು ತಿಳಿಸುತ್ತದೆ ಎಂದು ಅವರು ವಿವರಿಸಿದ್ದಾರೆ.

                ಈ ಹಿಂದೆ ತಮಿಳುನಾಡಿನ ವಿವಿಧ ದೇವಸ್ಥಾನಗಳಿಂದ ವಿಗ್ರಹಗಳನ್ನು ಕದ್ದು ಹಲವಾರು ದೇಶಗಳಿಗೆ ಸಾಗಿಸಲಾದ ವಿಗ್ರಹಗಳನ್ನು ಪತ್ತೆಹಚ್ಚಲು ಮದ್ರಾಸ್ ಹೈಕೋರ್ಟ್‌ನಿಂದ ಮಾಣಿಕ್ಕವೇಲ್ ಅವರನ್ನು ನೇಮಿಸಲಾಗಿತ್ತು. ಅವರು ಆಗ ವಿಗ್ರಹ ವಿಭಾಗದ ಮುಖ್ಯಸ್ಥರಾಗಿದ್ದರು.

               ಈ ಕುರಿತು ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಪುರಾತತ್ವ ಇಲಾಖೆಯ ನಿರ್ದೇಶಕ ಡಾ. ಆರ್. ಗೋಪಾಲ್, ಈ ಬಗ್ಗೆ ಇಲಾಖೆಗೆ ಯಾವುದೇ ಅಧಿಕೃತ ಕರೆ ಬಂದಿಲ್ಲ. ದೇವಸ್ಥಾನ ಕಣ್ಮರೆಯಾಗುವ ಸಾಧ್ಯತೆ ಕಡಿಮೆಯಾದರೂ, ಪರಿಶೀಲನೆಗಾಗಿ ನಾವು ತುಮಕೂರಿನ ಕುಣಿಗಲ್‌ ಗ್ರಾಮಕ್ಕೆ ಶೀಘ್ರದಲ್ಲೇ ಭೇಟಿ ನೀಡುತ್ತೇವೆ ಎಂದಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries