ಕಾಸರಗೋಡು: ಅಂತಾರಾಷ್ಟ್ರೀಯ ಕಾನೂನು ಸಪ್ತಾಹದ ಅಂಗವಾಗಿ ವೆಳ್ಳರಿಕುಂಡ್ ಬಾಲ ಸ್ನೇಹಿ ಪೆÇಲೀಸ್ ಠಾಣೆ, ಜನಮೈತ್ರಿ ಪೆÇಲೀಸ್ ಮತ್ತು ಐಸಿಡಿಎಸ್ ವತಿಯಿಂದ ಹದಿಹರೆಯದ ಮಕ್ಕಳಿಗೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪೂವತ್ತುಮೊಟ್ಟ ಮತ್ತು ಪುಲ್ಲೋಡಿ ಪ್ರದೇಶದ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಕ್ಕಳ ರಕ್ಷಣಾ ಕಾನೂನು ಹಾಗೂ ಹಕ್ಕುಗಳ ಬಗ್ಗೆಯೂ ಚರ್ಚಿಸಲಾಯಿತು. ವೆಳ್ಳರಿಕುಂಡ್ ಪೆÇಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ವೇಣು, ಎಎಸ್ಐ ಉಣ್ಣಿರಾಜ್ ಹಾಗೂ ಗೃಹರಕ್ಷಕ ದಳದ ಗೋಪಿ ಮತ್ತು ರಾಜನ್ ಮಕ್ಕಳೊಂದಿಗೆ ಸಂವಾದ ನಡೆಸಿದರು. ಜನ ಮೈತ್ರಿ ಬೀಟ್ ಅಧಿಕಾರಿ ಶಿಜಿತ್ ಅವರು ಮಕ್ಕಳಿಗೆ ರಕ್ಷಣೆ ನೀಡುವ ಕಾನೂನು ಮತ್ತು ಕಾನೂನು ವ್ಯವಸ್ಥೆಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು. ಪುಲ್ಲೋಡಿ ಮತ್ತು ಪೂವತ್ತುಮೊಟ್ಟದ ಅಂಗನವಾಡಿ ಶಿಕ್ಷಕಿಯರಾದ ಲಕ್ಷ್ಮಿಕುಟ್ಟಿ, ಬಿಂದು ಉಪಸ್ಥಿತರಿದ್ದರು.