ಉಪ್ಪಳ: ಕೊಂಡೆವೂರು ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠ ವಿದ್ಯಾಸಂಸ್ಥೆಯಲ್ಲಿ ಜುಲೈ 30 ರಂದು ಶನಿವಾರ ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ ದ ಸಲುವಾಗಿ ಅಂತರ್ ಶಾಲಾ ಮಟ್ಟದಲ್ಲಿ ವಿವಿಧ ಸ್ಪರ್ಧೆಗಳು ಜರಗಲಿದ್ದು ಆ ಬಗೆಗಿನ ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ ಶ್ರೀ ಯೋಗಾನಂದಸರಸ್ಡತೀ ಸ್ವಾಮೀಜಿ ಅನಾವರಣಗೊಳಿಸಿ ಹರಸಿದರು.
ಈ ಸಂದರ್ಭದಲ್ಲಿ ನಡೆದ ಕಾರ್ಯಕಾರೀ ಸಮಿತಿಯ ಸಭೆಯಲ್ಲಿ ಕಾರ್ಯಕ್ರಮದ ಪೂರ್ವಸಿದ್ಧತೆಯ ಕುರಿತಾದ ರೂಪುರೇμÉಯನ್ನು ತಯಾರಿಸಲಾಯಿತು. ಶಾಲೆಯ ಆಡಳಿತ ಸಮಿತಿಯ ಉಪಾಧ್ಯಕ್ಷ ಸುಧಾಕರ್, ಉಪಾಧ್ಯಕ್ಷೆ ಜಯಲಕ್ಷ್ಮೀ ಕಾರಂತ, ಕಾರ್ಯದರ್ಶಿ ಜಯಶೀಲಾ, ಕೋಶಾಧಿಕಾರಿ ಸುರೇಶ್, ಸದಸ್ಯರಾದ ವಿ.ಬಿ. ಕುಳಮರ್ವ, ಚಂದ್ರಹಾಸ, ಶಾಲಾ ಕ್ಷೇಮಸಮಿತಿಯ ಅಧ್ಯಕ್ಷ ತಾರಾನಾಥ, ಹಾಗೂ ವಿವಿಧ ಸಮಿತಿಗಳ ಸದಸ್ಯರು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಕೊಂಡೆವೂರು: ಅಂತರ್ ಶಾಲಾ ಮಟ್ಟದಲ್ಲಿ ವಿವಿಧ ಸ್ಪರ್ಧೆಗಳ ಆಮಂತ್ರಣ ಪತ್ರಿಕೆ ಬಿಡುಗಡೆ
0
July 25, 2022