ಮಂಜೇಶ್ವರ :ಜ್ಞಾನೋದಯ ಸಮಾಜ ದೈಗೋಳಿಯ ಆಶ್ರಯದಲ್ಲಿ ಆಗಸ್ಟ್ 31 ಬುಧವಾರ ದಂದು ಜರಗುವ 41ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಶ್ರೀ ಗಣೇಶ ಮಂದಿರದಲ್ಲಿ ಜರಗಿತು.
ಆಮಂತ್ರಣ ಪತ್ರಿಕೆಯನ್ನು ಗಣೇಶೋತ್ಸವ ಸಮಿತಿಯ ಅಧ್ಯ ಸತ್ಯನಾರಾಯಣ ಭಟ್ ದೈಗೋಳಿ ಬಿಡುಗಡೆ ಗೊಳಿಸಿದರು. ಗೌರವಧ್ಯಕ್ಷ ಪಿ. ಶಿವರಾಮ ಭಟ್ ಮಡ್ವ, ಉಪಾಧ್ಯಕ್ಷರಾದ ಪಿ. ಸೋಮಪ್ಪ ದೈಗೋಳಿ, ಶಂಕರನಾರಾಯಣ ಭಟ್ ದೈಗೋಳಿ, ಭಾ. ವಿ. ಸುರೇಶ್ ಹಾಗೂ ಸಮಿತಿ ಸದಸ್ಯರಾದ ಬಾಬು ಮೂಲ್ಯ ದೈಗೋಳಿ, ಗೋಪಾಲ ಕ್ರಷ್ಣ ಭಟ್ ಪಾರೆ ಕುಂಡಡ್ಕ, , ಜಗನ್ನಾಥ ಎಂ ದೈಗೋಳಿ, ಚಂದ್ರಹಾಸ ಹೆಬ್ಬಾರ್ ದೈಗೋಳಿ, ಮಾಧವ ಶೆಟ್ಟಿಗಾರ್ ದೈಗೋಳಿ, ಮಾಧವ ನಿರೋಳಿಕೆ, ವಿಜಯ ಕುಮಾರ್ ಗೋಳಿಪಡ್ಪು, ರಾಜಗೋಪಾಲ್ ದೈಗೋಳಿ, ಸುಧೀರ್ ರಂಜನ್ ದೈಗೋಳಿ, ಕೃಷ್ಣ ಸಾಯಿ ನಿಲಯ ದೈಗೋಳಿ ಉಪಸ್ಥಿತರಿದ್ದರು.
ದೈಗೋಳಿ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
0
July 27, 2022