ಕಾಸರಗೋಡು: ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಮಧೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಅವರ ಭಾವಚಿತ್ರ ಅನಾವರಣಗೊಂಡಿದೆ. ಪಂಚಾಯಿತಿ ಬಿಜೆಪಿ ಸಮಿತಿ ವತಿಯಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾವಚಿತ್ರದೊಂದಿಗೆ ಮೆರವಣಿಗೆ ಮೂಲಕ ಕಚೇರಿಗೆ ಆಗಮಿಸಿದ ಕಾರ್ಯಕರ್ತರು ಭಾವಚಿತ್ರವನ್ನು ಮಧೂರು ಗ್ರಾಪಂ ಅಧ್ಯಕ್ಷ ಕೆ. ಗೋಪಾಲಕೃಷ್ಣ ಅವರಿಗೆ ಹಸ್ತಾಂತರಿಸಿದರು.
ಬಿಜೆಪಿ ಕಾಸರಗೋಡು ಮಂಡಲ ಸಮಿತಿ ಅಧ್ಯಕ್ಷೆ ಪ್ರಮಿಳಾ ಮಜಲ್ ಭಾವಚಿತ್ರ ಹಸ್ತಾಂತರಿಸಿದರು. ಬಿಜೆಪೊ ಮಧೂರು ಈಸ್ಟ್ ಅಧ್ಯಕ್ಷ ರವೀಂದ್ರ ರಐ, ಮಧೂರು ವೆಸ್ಟ್ ಅಧ್ಯಕ್ಷ ಚಂದ್ರಹಾಸ ಮಾಸ್ಟರ್, ಜಿಲ್ಲಾ ಕೋಶಾಧಿಖಾರಿ ಮಹಾಬಲ ರೈ, ಯುವಮೋರ್ಚಾ ಅಧ್ಯಕ್ಷ ಧನಂಜಯ ಮಧೂರ್, ಮಹಿಳಾ ಮೋರ್ಚಾ ಅಧ್ಯಕ್ಷೆ ಪುಷ್ಪಾ ಗೋಪಾಲ್, ಜಿಲ್ಲಾ ಎಸ್.ಸಿ ಮೋರ್ಚಾ ಅಧ್ಯಕ್ಷ ಸಂಪತ್, ಮಂಡಲ ಕೃಷಿಕ ಮೋರ್ಚಾ ಅಧ್ಯಕ್ಷ ನವನೀತ್ ರೈ ಉಪಸ್ಥಿತರಿದ್ದರು.
ಮಧೂರು ಗ್ರಾಮ ಪಂಚಾಯಿತಿಯಲ್ಲಿ ರಾಷ್ಟ್ರಪತಿ ಭಾವವಚಿತ್ರ-ಮೆರವಣಿಗೆ ಮೂಲಕ ಹಸ್ತಾಂತರ
0
July 27, 2022