HEALTH TIPS

ಕೇರಳ ರಾಜ್ಯ ಕನ್ನಡ ಬರಹಗಾರರ ಸಂಘದ ಸಭೆ


              ಬದಿಯಡ್ಕ: ಕೇರಳ ರಾಜ್ಯ ಕನ್ನಡ ಬರಹಗಾರರ ಸಂಘದ ವಿಶೇಷ ವಾರ್ಷಿಕ ಮಹಾಸಭೆ  ಪ್ರಸಿದ್ಧ ಸಾಹಿತಿ,ಕವಿ ವಿ.ಬಿ.ಕುಳಮರ್ವ ಅವರ ಅಧ್ಯಕ್ಷತೆಯಲ್ಲಿ  ಭಾನುವಾರ ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ನಡೆಯಿತು.



       ಸಂಘದ ಅಧ್ಯಕ್ಷ  ಜಿ.ವೀರೇಶ್ವರ ಭಟ್ ಕರ್ಮರ್ಕರ್ ಗಂಗೇನೀರು (ಜೀವಿ ಗಂಗೇನೀರು) ಅವರು  ಪ್ರಾಸ್ತಾವಿಕವಾಗಿ ಮಾತನಾಡಿ ಕೇರಳ ರಾಜ್ಯ ಕನ್ನಡ ಬರಹಗಾರರ ಸಂಘವು ಬೆಳೆದು ಬಂದ ಬಗೆಯನ್ನು ವಿವರಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲರೂ ಸಂಘದ ಬೆಳವಣಿಗೆಗೆ ಕನ್ನಡಿಗರು ಹೇಗೆ ಸ್ಪಂದಿಸಬೇಕು ಎಂದು ತಮ್ಮ ಅನಿಸಿಕೆ ಹಂಚಿಕೊಡರು. ಈ ಸಂದರ್ಭ ಹೊಸ ಸಮಿತಿಯ ರೂಪೀಕರಣ ಮಾಡಲಾಯಿತು. ಮುಂದಿನ ದಿನಗಳಲ್ಲಿ ಯಾರೂ ಗೈರುಹಾಜರಾಗಬಾರದು. ಮೂರು ಸಭೆಗೆ ಗೈರುಹಾಜರಾದರೆ ಅಂತಹ ಸದಸ್ಯರನ್ನು ಕಾರ್ಯಕಾರಿಣಿ ಸಮಿತಿಯಿಂದ ಕೈಬಿಡುವ  ಅಧಿಕಾರ  ಸಮಿತಿಗೆ ಇದೆ ಎಂದು ತಿಳಿಸಲಾಯಿತು. ಶೈಲಜಾ ಟೀಚರ್ ಪ್ರಾರ್ಥನಾಗೀತೆ ಹಾಡಿದರು. ಶಿವರಾಮ ಭಟ್ ಸರವು ಸ್ವಾಗತಿಸಿ, ನೂತನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡ  ಪಭಾವತಿ ಕೆದಿಲಾಯ  ವಂದಿಸಿದರು.  


 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries