ಮಂಜೇಶ್ವರ: ವಿದ್ಯಾವರ್ಧಕ ಎ. ಯು.ಪಿ ಶಾಲೆ ಮೀಯಪದವಿನಲ್ಲಿ 2022-23ನೇ ಶೈಕ್ಷಣಿಕ ವರ್ಷದ ಶಾಲಾ ನಾಯಕ/ನಾಯಕಿಯ ಆಯ್ಕೆ ಹಾಗೂ ಪಾರ್ಲಿಮೆಂಟ್ ರೂಪಿಕರಣ ಯಂ.ರಾಮಕೃಷ್ಣ ರಾವ್ ಸಭಾಂಗಣದಲ್ಲಿ ಜರಗಿತು. 9 ಮಂದಿ ಅಭ್ಯರ್ಥಿಗಳು ಮುಖ್ಯ ಚುನಾವಣಾಧಿಕಾರಿಯಾದ ಮುಖ್ಯೋಪಾಧ್ಯಾಯ ಅರವಿಂದಾಕ್ಷ ಭಂಡಾರಿ ಇವರಿಗೆ ನಾಮ ಪತ್ರ ಸಲ್ಲಿಸಿದರು.
ವಿದ್ಯಾರ್ಥಿಗಳು ಮುದ್ರೆ ಒತ್ತಿದ ಕಾಗದವನ್ನು ಮತ ಪೆಟ್ಟಿಗೆಗೆ ಹಾಕುವುದರ ಮೂಲಕ ಮತದಾನ ಗೈದರು. ಒಟ್ಟು 499 ವಿದ್ಯಾರ್ಥಿಗಳು ಮತ ಹಾಕಿದರು.ಏಳನೇ ತರಗತಿಯ ತನ್ವಿ ಶಾಲಾ ನಾಯಕಿಯಾಗಿ ಹಾಗೂ ಮೊಹಮ್ಮದ್ ಜುಬೈರ್ ಉಪನಾಯಕನಾಗಿ ಆಯ್ಕೆಗೊಂಡರು. ಶಾಲಾ ದೈಹಿಕ ಶಿಕ್ಷಕರಾದ ಎಸ್. ಎಸ್.ಪ್ರಸಾದ್ ಹಾಗೂ ಶಾಲಾ ಸಮಾಜ ವಿಜ್ಞಾನ ಕ್ಲಬ್ ನ ಸಂಚಾಲಕ ಮಹಾಬಲೇಶ್ವರ ಭಟ್ ಚುನಾವಣೆಯ ನೇತೃತ್ವ ವಹಿಸಿದ್ದರು.