HEALTH TIPS

ಕೃಷಿಭವನ ವತಿಯಿಂದ ಸಾರ್ವಜನಿಕ ಸಂತೆ, ಕೃಷಿಕರ ಸಮಾವೇಶ

               ಕಾಸರಗೋಡು: ಸಾರ್ವಜನಿಕ ಸಂತೆ ಹಾಗೂ ಕೃಷಿಕರ ಸಮಾವೇಶ ಕಾಸರಗೋಡು ಕೃಷಿಭವನದಲ್ಲಿ ಜರುಗಿತು. ಕಾಸರಗೋಡು ನಗರಸಭಾ ಅಧ್ಯಕ್ಷ, ವಕೀಲ ವಿ.ಎಂ.ಮುನೀರ್ ಸಮಾವೇಶ ಉದ್ಘಾಟಿಸಿದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಅಬ್ಬಾಸ್ ಬೀಗಂ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಸದಸ್ಯರು ಮತ್ತು ಕೃಷಿ ಅಭಿವೃದ್ಧಿ ಸಮಿತಿ ಸದಸ್ಯರು ುಪಸ್ಥಿತರಿದ್ದರು. ಕೃಷಿ ಅಧಿಕಾರಿ ಎಂ.ಪಿ.ಶ್ರೀಜಾ ಸ್ವಾಗತಿಸಿ, ಸಹಾಯಕ ಕೃಷಿ ಅಧಿಕಾರಿ ಸಿ.ಎಚ್.ರಾಜೀವನ್ ಧನ್ಯವಾದವಿತ್ತರು. ಹಿರಿಯ ಕೃಷಿಕ ಎನ್.ಬಿ.ಪದ್ಮನಾಭನ್ ಭತ್ತದ ನಾಟಿಯ ಮಹತ್ವದ ಕುರಿತು ಮಾತನಾಡಿದರು. ರೈತರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಈ ಸಂದರ್ಭ ತರಕಾರಿ ಸಸಿಗಳು ಮತ್ತು ಬೀಜಗಳನ್ನು ವಿತರಿಸಲಾಯಿತು. ರೈತರು ತಂದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries