ಕಾಸರಗೋಡು: ವಿದ್ಯಾನಗರದ ಚಿನ್ಮಯ ವಿದ್ಯಾಲಯದಲ್ಲಿ ಕಾರ್ಗಿಲ್ ವಿಜಯ ದಿನವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಶಾಲೆಯ ಸಾಮಾಝಿಕ ವಿಜ್ಞಾನ ವಿಭಾಗ ವತಿಯಿಂದ ಕಾರ್ಯಕ್ರಮ ನಡೆಯಿತು. ಚಿನ್ಮಯ ಮಿಷನ್ ಕೇರಳ ರಾಜ್ಯದ ಮುಖ್ಯಸ್ಥ ಹಾಗೂ ಕಾಸರಗೋಡು ಚಿನ್ಮಯ ವಿದ್ಯಾಲಯದ ಅಧ್ಯಕ್ಷ ಸ್ವಾಮಿ ವಿವಿಕ್ತಾನಂದಸರಸ್ವತಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ನಮ್ಮ ಯೋಧರು ಕಾರ್ಗಿಲ್ ಯುದ್ಧದಲ್ಲಿವಿಜಯವನ್ನು ಸಾಧಿಸುವ ಮೂಲಕ ಭಾರತದ ಸೇನೆಯ ಶಕ್ತಿ ಸಾಮಥ್ರ್ಯವನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ದೇಶಕ್ಕಾಗಿ ಹೋರಾಡಿ ವೀರ ಮೃತ್ಯು ಪಡೆದ ನಮ್ಮ ಜವಾನರನ್ನು ಸ್ಮರಿಸಿ ಗೌರವಸಲ್ಲಿಸಬೇಕಾದುದು ನಮ್ಮೆಲ್ಲರ ಕರ್ತವ್ಯವಾಘಿದೆ ಎಂದು ತಿಳಿಸಿದರು.
ಕಾರ್ಗಿಲ್ ಕದನಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ದೇಶಭಕ್ತಿಯನ್ನುಉದ್ದೀಪನಗೊಳಿಸುವ ದೇಶಭಕ್ತಿ ಗೀತೆ, ಪವರ್ ಪಾಯಿಂಟ್ , ಮೂಕಾಭಿನಯ, ನೃತ್ಯವೈವಿಧ್ಯತೆಯನ್ನು ಪ್ರಸ್ತುತಿ ಪಡಿಸಿದರು. ವಿದ್ಯಾಲಯದ ಪ್ರಾಂಶುಪಾಲ ಡಾ.ಬಿಜು ಮಡತ್ತಿಲ್,ಮುಖ್ಯೋಪಾಧ್ಯಾಯಿನಿಯರಾದ ಪೂರ್ಣಿಮಾ ಎಸ್ ಆರ್. ಸಿಂಧುಶಶೀಂದ್ರನ್, ಕಾರ್ಯಕ್ರಮದ ಆಯೋಜಕಿ ಜಯಶ್ರೀ ಪಲೇರಿ , ಅಧ್ಯಾಪಕÀರು ,ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಆದ್ರ9 ಸುನಿಲ್ ಸ್ವಾಗತಿಸಿದರು. ಇಜಾ ಫಾತಿಮ ಕಾರ್ಯಕ್ರಮ ನಿರೂಪಿಸಿದರು. ಕ್ಷಿಪ್ರ ಶೆಟ್ಟಿ ವಂದಿಸಿದರು.
ಚಿನ್ಮಯ ವಿದ್ಯಾಲಯದಲ್ಲಿ ಕಾರ್ಗಿಲ್ ವಿಜಯ ದಿನಾಚರಣೆ
0
July 27, 2022