HEALTH TIPS

ರಾಜಸ್ಥಾನದಿಂದ ಕೇರಳಕ್ಕೆ ಮಾನವ ಕಳ್ಳಸಾಗಣೆ: ಪಾದ್ರಿ ಜೇಕಬ್ ವರ್ಗೀಸ್ ಬಂಧನ


             ಕೋಝಿಕ್ಕೋಡ್: ಇತರ ರಾಜ್ಯಗಳಿಂದ ಕೇರಳಕ್ಕೆ ಮಕ್ಕಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಪ್ರಕರಣದಲ್ಲಿ ಪೆರುಂಬವೂರ್ ಮೂಲದ ಕರುಣಾ ಚಾರಿಟೇಬಲ್ ಟ್ರಸ್ಟ್ ನ ನಿರ್ದೇಶಕರನ್ನು ಬಂಧಿಸಲಾಗಿದೆ.
              ಇಂಡಿಪೆಂಡೆಂಟ್ ಪೆಂಟೆಕೋಸ್ಟಲ್ ಚರ್ಚ್ ಪಾದ್ರಿ ಜೇಕಬ್ ವರ್ಗೀಸ್ ಬಂಧಿತ ವ್ಯಕ್ತಿ. ಸಾಕಷ್ಟು ದಾಖಲೆಗಳಿಲ್ಲದೆ ಚಾರಿಟೇಬಲ್ ಟ್ರಸ್ಟ್ ಕಾರ್ಯನಿರ್ವಹಿಸುತ್ತಿರುವುದನ್ನು ಪೋಲೀಸರು ಪತ್ತೆ ಮಾಡಿದ್ದಾರೆ. ಇದಾದ ಬಳಿಕ ಪೋಲೀಸರು ಆತನನ್ನು ಬಂಧಿಸಿದ್ದಾರೆ.
               ನಿನ್ನೆ ರಾತ್ರಿ ಕರುಣಾಲಯಕ್ಕೆ ಕರೆತರಲಾಗುತ್ತಿದ್ದ ಮಕ್ಕಳನ್ನು ಕೋಝಿಕ್ಕೋಡ್ ರೈಲು ನಿಲ್ದಾಣದಿಂದ ಪೆÇಲೀಸರು ವಶಕ್ಕೆ ಪಡೆದಿದ್ದಾರೆ. ರಾಜಸ್ಥಾನದ 12 ಮಕ್ಕಳು ಮತ್ತು ಆರು ವಯಸ್ಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಮಕ್ಕಳನ್ನು ವಿಚಾರಣೆಗೊಳಪಡಿಸಿದಾಗ ನಾಲ್ವರು ಪೋಷಕರು ಹಾಗೂ ಇಬ್ಬರು ಮಧ್ಯವರ್ತಿಗಳು ಎಂಬುದು ತಿಳಿದು ಬಂದಿದೆ. ಇದರೊಂದಿಗೆ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಚಾರಿಟೇಬಲ್ ಟ್ರಸ್ಟ್‍ಗೆ ಕರೆತಂದ ಮಕ್ಕಳು ಎಂಬುದು ಸ್ಪಷ್ಟವಾಗಿದೆ.
           ಮಕ್ಕಳನ್ನು ಕಲಿಸಲು ಕೇರಳಕ್ಕೆ ಕರೆತಂದಿದ್ದೆವು ಎಂದು ಇಬ್ಬರೂ ಪೋಲೀಸರಿಗೆ ಹೇಳಿಕೆ ನೀಡಿದ್ದರು. ಆದರೆ ಇದನ್ನು ಸ್ಪಷ್ಟಪಡಿಸುವ ಯಾವುದೇ ದಾಖಲೆಗಳು ಅವರ ಬಳಿ ಇರಲಿಲ್ಲ. ಇದಾದ ಬಳಿಕ ಚಾರಿಟಬಲ್ ಟ್ರಸ್ಟ್ ನ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿದಾಗ ಅಕ್ರಮ ನಡೆಸುತ್ತಿರುವುದು ಪತ್ತೆಯಾಗಿದೆ. ಜೇಕಬ್ ವರ್ಗೀಸ್ ಅವರನ್ನು ರಾತ್ರಿ ಕಸ್ಟಡಿಗೆ ತೆಗೆದುಕೊಂಡು ಪೋಲೀಸ್ ವಿಚಾರಣೆ ನಂತರ ಬಂಧಿಸಲಾಯಿತು. ಮಕ್ಕಳಿಗೆ ಕಲಿಸಲು ಇಲ್ಲಿಗೆ ಕರೆತರಲಾಗಿತ್ತು ಎಂದೂ ಪಾದ್ರಿ ಪೋಲೀಸರಿಗೆ ತಿಳಿಸಿದ್ದಾರೆ.
              ಲೋಕೇಶ್ ಕುಮಾರ್ ಮತ್ತು ಶ್ಯಾಮ್ ಲಾಲ್ ಅವರನ್ನು ರೈಲ್ವೆ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಅವರ ವಿರುದ್ಧ ಮಾನವ ಕಳ್ಳಸಾಗಣೆ ಪ್ರಕರಣ ದಾಖಲಾಗಿದೆ.  ಇದೇ ಆರೋಪದ ಮೇಲೆ ಜೇಕಬ್ ವರ್ಗೀಸ್ ಅವರನ್ನು ಕೂಡ ಬಂಧಿಸಲಾಗಿದೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries