HEALTH TIPS

ಪಿ ಜಯರಾಜನ್ ಅವರ ಕರೆಯನ್ನು ಸ್ವೀಕರಿಸಿದ ಕಾರ್ಯಕರ್ತರು: ಕರ್ಕಟಕ ಅಮಾವಾಸ್ಯಗೆ ಹೆಲ್ಪ್ ಡೆಸ್ಕ್ ತೆರೆದಿದ್ದ ಎಡ ಸಂಘಟನೆ


                 ಕಣ್ಣೂರು: ಕರ್ಕಟಕ ಅಮಾವಾಸ್ಯೆ ಬಲಿಗೆ ಮುಂದಾಗಬೇಕು ಎಂಬ ಸಿಪಿಎಂ ಮುಖಂಡ ಪಿ.ಜಯರಾಜನ್ ಅವರ ಕರೆಯನ್ನು ಸಿಪಿಎಂ ಕಾರ್ಯಕರ್ತರು ಪಾಲಿಸಿದ್ದಾರೆ.
        ಬಲಿತಾರ್ಪಣದಲ್ಲಿ ಭಾಗವಹಿಸಲು ಆಗಮಿಸುವ ಭಕ್ತರಿಗೆ ಸಹಾಯ ಕೇಂದ್ರವನ್ನು ಸ್ಥಾಪಿಸುವ ಮೂಲಕ ಸಿಪಿಎಂ ಕಾರ್ಯಕರ್ತರು ಜಯರಾಜನ್ ಅವರ ಸೂಚನೆಗಳನ್ನು ಅನುಸರಿಸಿದರು.
           ಸಿಪಿಎಂ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂಸೇವಾ ಸಂಸ್ಥೆ ಐ.ಆರ್.ಪಿ.ಸಿ. (ಇನಿಶಿಯೇಟಿವ್ ಫಾರ್ ರಿಹ್ಯಾಬಿಲಿಟೇಶನ್ ಅಂಡ್ ಪ್ಯಾಲಿಯೇಟಿವ್ ಕೇರ್) ಹೆಲ್ಪ್ ಡೆಸ್ಕ್ ವ್ಯವಸ್ಥೆಗೊಳಿಸಿತ್ತು.
           ಗುರುವಾರ ಕಣ್ಣೂರಿನ ಪ್ರಮುಖ ಆರಾಧನಾ ಕೇಂದ್ರವಾದ ಪಯ್ಯಂಬಲಂನಲ್ಲಿ ಸಂಘಟನೆಯು ಬೆಂಬಲ ಕೇಂದ್ರವನ್ನು ತೆರೆಯಿತು. P. ಜಯರಾಜನ್ ಐ.ಆರ.ಪಿ.ಸಿ. ಸಲಹಾ ಸಮಿತಿಯ ಅಧ್ಯಕ್ಷರು. ಕರ್ಕಟಕ ಅಮಾವಾಸ್ಯೆ ಬಲಿ ತರ್ಪಣ ಸಮಾರಂಭಗಳಿಗೆ ನೆರವಿಗೆ ಮುಂದಾಗುವಂತೆ ಮೊನ್ನೆ ಫೇಸ್‍ಬುಕ್‍ನಲ್ಲಿ ಕರೆ ನೀಡಿದ್ದರು. ಕರ್ಕಟಕ ಅಮಾವಾಸ್ಯೆಗೆ ಆಚರಣೆಗೆ ಯಾವುದೇ ಧರ್ಮವಿಲ್ಲ, ಮುಖವಾಡ ಧರಿಸಿದ ಭಯೋತ್ಪಾದಕರಿಗೆ ಅವಕಾಶ  ನೀಡಬಾರದು ಎಂದು ಹೇಳಿದ್ದರು.
           ಇದಕ್ಕೂ ಮುನ್ನ ರ್ಷಗಳ ಹಿಂದೆ ಪಿ ಜಯರಾಜನ್ ಕಣ್ಣೂರಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಗೆ ಚಾಲನೆ ನೀಡಿದ್ದÀರು. ಇದು ಅವರು ಜಿಲ್ಲಾ ಕಾರ್ಯದರ್ಶಿಯಾಗಿದ್ದಾಗ. ಆಗ ಅವರ ಮಧ್ಯಸ್ಥಿಕೆಗಳು ಪಕ್ಷದೊಳಗೆ ಭಾರೀ ಟೀಕೆಗೆ ಕಾರಣವಾಗಿತ್ತು. ಬಹಳ ವಿವಾದಕ್ಕೀಡಾಗಿದ್ದ ಶ್ರೀಕೃಷ್ಣ ಜಯಂತಿ ಮೆರವಣಿಗೆಗೆ ಪರ್ಯಾಯವಾಗಿ ಬಾಲಸಂಘವು ಮೆರವಣಿಗೆಯನ್ನು ಆಯೋಜಿಸಿತ್ತು. ಇದಾದ ಬಳಿಕ ಕರ್ಕಟಕ ಬಲಿ ತರ್ಪಣ ಕಾರ್ಯಕ್ರಮಕ್ಕೂ ಪಕ್ಷದ ಕಡೆಯಿಂದ ಕರೆ ನೀಡಿದ್ದು ಹಲವು ಚರ್ಚೆಗೆ ಕಾರಣವಾಗಿತ್ತು.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries