HEALTH TIPS

ಕೇರಳಕ್ಕೆ ಮಕ್ಕಳ ಕಳ್ಳಸಾಗಣೆ; ಕರುಣಾಭವನದ ಕಾರ್ಯಗಳಲ್ಲಿ ನಿಗೂಢತೆ; ಮಾನವ ಕಳ್ಳಸಾಗಣೆ ಕುರಿತು ಪೋಲೀಸರಿಂದ ತೀವ್ರ ತನಿಖೆ


                  ಕೋಝಿಕ್ಕೋಡ್: ರಾಜಸ್ಥಾನದಿಂದ ಕೇರಳಕ್ಕೆ ಮಕ್ಕಳ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರು ತೀವ್ರ ತನಿಖೆ ಆರಂಭಿಸಿದ್ದಾರೆ.
          ಈ ಹಿಂದೆಯೂ ಇದೇ ರೀತಿ ಮಕ್ಕಳನ್ನು ಬೇರೆ ರಾಜ್ಯಗಳಿಂದ ಕೇರಳಕ್ಕೆ ಕರೆತರಲಾಗಿದೆ ಎಂದು ಪೋಲೀಸರು ಶಂಕಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತನಿಖೆಯನ್ನು ತೀವ್ರಗೊಳಿಸಲು ನಿರ್ಧರಿಸಲಾಗಿದೆ. ಇದೇ ವೇಳೆ ಮಕ್ಕಳನ್ನು ಕರೆತಂದ ಕರುಣಾಭವನ ಆಶ್ರಮದ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಮಕ್ಕಳ ಕಲ್ಯಾಣ ಸಮಿತಿ ಪ್ರಕಟಿಸಿದೆ.
         ಘಟನೆಯಲ್ಲಿ ಕರುಣಾಭವನ್ ನಿರ್ದೇಶಕ  ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ವಿವರವಾದ ತನಿಖೆಯ ಭಾಗವಾಗಿ ಅವರನ್ನು ಪೋಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗುವುದು. ಕರುಣಾಭವನದ ಚಟುವಟಿಕೆಗಳ ಬಗ್ಗೆ ಪೆÇಲೀಸರ ಬಳಿ ಯಾವುದೇ ವಿವರವಾದ ಮಾಹಿತಿ ಇಲ್ಲ. ಇಲ್ಲಿಯವರೆಗೂ ಕರುಣಾಭವನ ನಿಯಮಾವಳಿ ಪಾಲಿಸದೆ ಕೆಲಸ ಮಾಡುತ್ತಿದೆ.
            ನಿನ್ನೆ ಕೋಝಿಕ್ಕೋಡ್ ರೈಲು ನಿಲ್ದಾಣದಿಂದ 12 ಮಕ್ಕಳನ್ನು ರೈಲ್ವೇ ಪೋಲೀಸರು ಬಂಧಿಸಿದ್ದರು. ಕರುಣಾಭವನದ ಮಕ್ಕಳ ಕಳ್ಳಸಾಗಣೆ ಬೆಳಕಿಗೆ ಬಂದಿದ್ದು ಹೀಗೆ. ಅವರ ಜೊತೆಯಲ್ಲಿ ಪೋಷಕರು ಮತ್ತು ಇಬ್ಬರು ಮಧ್ಯವರ್ತಿಗಳಿದ್ದರು. ಮಧ್ಯವರ್ತಿಗಳ ಪ್ರಕಾರ, ಮಕ್ಕಳಿಗೆ ಶಿಕ್ಷಣ ಕೊಡಿಸಲು ಕೇರಳಕ್ಕೆ ಕರೆತಂದರು. ಘಟನೆಯಲ್ಲಿ ಇಬ್ಬರು ಮಧ್ಯವರ್ತಿಗಳು ಮತ್ತು ಕರುಣಾಭವನದ ನಿರ್ದೇಶಕ ಜೇಕಬ್ ವರ್ಗೀಸ್ ಅವರನ್ನು ಬಂಧಿಸಲಾಗಿದೆ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries