HEALTH TIPS

ಓಣಂ ಬಂಪರ್ ಎಲ್ಲಿದೆ? ಅದೃಷ್ಟವನ್ನು ಹುಡುಕುವವರಿಗೆ ಟಿಕೆಟ್ ಕೊರತೆ: ಶಾಯಿ ಒಣಗಲು ಸಮಯಾವಕಾಶ ಬೇಕೆಂದು ಸ್ಪಷ್ಟನೆ ನೀಡಿದ ಲಾಟರಿ ನಿರ್ದೇಶನಾಲಯ!

             
           ತಿರುವನಂತಪುರ: ರಾಜ್ಯದಲ್ಲಿ ಮೊದಲ ಕೆಲವು ವಾರಗಳಲ್ಲಿ ಅಂಗಡಿಗಳಲ್ಲಿ ಓಣಂ ಬಂಪರ್ ಟಿಕೆಟ್‍ಗಳ ಕೊರತೆ ಕಂಡುಬಂದಿದೆ. ಮುದ್ರಣ ಕಡಿತದಿಂದಾಗಿ 2,500 ಪ್ರತಿಗಳನ್ನು ಪಡೆಯುತ್ತಿದ್ದ ಏಜೆಂಟರಿಗೆ ಕೇವಲ 250 ಪ್ರತಿಗಳು ಮಾತ್ರ ಲಭಿಸಿದೆ. ಮೊದಲ ಹಂತದಲ್ಲಿ 5 ಲಕ್ಷ ಟಿಕೆಟ್‍ಗಳನ್ನು ಮಾತ್ರ ಮುದ್ರಿಸಲಾಗಿತ್ತು. ಕಳೆದ ವರ್ಷ ಇದು 10 ಲಕ್ಷವಾಗಿತ್ತು ಎಂದು ಅಂಕಿ ಅಂಶಗಳು ತಿಳಿಸುತ್ತವೆ.
         ಪ್ಲೋರೋಸೆಂಟ್ ಶಾಯಿಯ ಅಸರ್ಪಕತೆಯಿಂದ ಮುದ್ರಣ ನಿಧಾನಗೊಂಡಿದೆ ಎಂದು ಲಾಟರಿ ನಿರ್ದೇಶನಾಲಯ ತಿಳಿಸಿದೆ. ಶಾಯಿ ಒಣಗಲು ಹೆಚ್ಚು ಸಮಯ ಬೇಕಾಗುತ್ತದೆ ಎಂದು ವಿವರಣೆ ನೀಡಿದೆ. ಓಣಂ ಬಂಪರ್‍ನ ಹೊಸ ಬಣ್ಣವನ್ನು ವರ್ಣರಂಜಿತವಾಗಿಸಲು ಅಲ್ಲ ಎಂದು ಲಾಟರಿ ನಿರ್ದೇಶನಾಲಯ ಸ್ಪಷ್ಟಪಡಿಸಿದೆ.ಟಿಕೆಟ್‍ನ ಭದ್ರತೆಯನ್ನು ಹೆಚ್ಚಿಸಲು ಹೊಸ ಬಣ್ಣದ ಶಾಯಿಯನ್ನು ಬಳಸಲಾಗುತ್ತದೆ. ಬಣ್ಣದಲ್ಲಿ ಮುದ್ರಿಸಲಾದ ನಕಲಿ ಲಾಟರಿಗಳನ್ನು ತಡೆಗಟ್ಟಲು ಫೆÇ್ಲೀರೊಸೆಂಟ್ ಬಣ್ಣವನ್ನು ಒದಗಿಸಲಾಗಿದೆ ಎಂದು ಲಾಟರಿ ನಿರ್ದೇಶನಾಲಯ ತಿಳಿಸಿದೆ.
        ಏತನ್ಮಧ್ಯೆ, ದರ ಏರಿಕೆಯಿಂದ ಲಾಟರಿ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ವ್ಯಾಪಾರಿಗಳು ಮತ್ತು ಭವಿಷ್ಯ ಹುಡುಕುವವರು ಹೇಳುತ್ತಾರೆ.
        ಈ ಬಾರಿಯ ಓಣಂ ಬಂಪರ್ ಬಹುಮಾನದ ಮೊತ್ತ 25 ಕೋಟಿ ರೂ. ಟಿಕೆಟ್ ದರ 500 ರೂ. ಎರಡನೇ ಬಹುಮಾನ ಐದು ಕೋಟಿ ರೂಪಾಯಿ. ತೃತೀಯ ಬಹುಮಾನವಾಗಿ 1 ಕೋಟಿ ರೂ.ಗಳನ್ನು 10 ಮಂದಿಗೆ ನೀಡಲಾಗುವುದು, ಶೇ.10 ಏಜೆನ್ಸಿ ಕಮಿಷನ್ ಮತ್ತು ಶೇ.30 ತೆರಿಗೆಯ ನಂತರ ಲಾಟರಿ ವಿಜೇತರಿಗೆ 15.75 ಕೋಟಿ ರೂ.ಲಭಿಸಲಿದೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries