HEALTH TIPS

ಸಿ.ಎಸ್.ಐ ಪ್ರಧಾನ ಕಛೇರಿಯಲ್ಲಿ ಬಿಷಪ್ ಬೆಂಬಲಿಗರು ಮತ್ತು ವಿರೋಧಿಗಳ ನಡುವೆ ಸಂಘರ್ಷ; ಇಡಿ ತಪಾಸಣೆ ಮುಗಿಸಿ ತೆರಳಿದ ಬಳಿಕ ಬುಗಿಲೆದ್ದ ಸಂಘರ್ಷ

      
               ತಿರುವನಂತಪುರ: ಸಿಎಸ್‍ಐ ದಕ್ಷಿಣ ಕೇರಳ ಮಹಾ ಪರಿμï ಪ್ರಧಾನ ಕಚೇರಿಯಲ್ಲಿ ಪ್ರತಿಭಟನೆ ಬುಗಿಲೆದ್ದಿದೆ. ಪಾಲಿಕೆ ಕೇಂದ್ರ ಕಚೇರಿಯಲ್ಲಿ ಇಡಿ ತಪಾಸಣೆ ಮುಗಿಸಿದ ಬಳಿಕ ಪ್ರತಿಭಟನೆ ನಡೆದಿದೆ. ಬಿಷಪ್‍ಗೆ ಬೆಂಬಲ ಮತ್ತು ವಿರೋಧ ವ್ಯಕ್ತಪಡಿಸಿದವರ ನಡುವೆ ಸಂಘರ್ಷ ಏರ್ಪಟ್ಟಿತ್ತು.
         ಇಡಿ ಪರೀಕ್ಷೆ ಮುಗಿಸಿ ಹಿಂತಿರುಗಿತು.  ತಪಾಸಣೆ ನಡೆಸಿದಾಗ ಏನೂ ಪತ್ತೆಯಾಗಿಲ್ಲ. ತಪಾಸಣಾ ತಂಡವು ಯಾವುದೇ ಕಡತಗಳನ್ನು ಅಥವಾ ಇತರ ದಾಖಲೆಗಳನ್ನು ತೆಗೆದುಕೊಂಡಿಲ್ಲ ಎಂದು ಚರ್ಚ್ ಪ್ರತಿನಿಧಿ ಹೇಳಿದರು. ಚರ್ಚ್ ಕಾರ್ಯದರ್ಶಿ ಟಿಟಿ ಪ್ರೆವೊನ್ ಮಾಹಿತಿನೀಡಿದರು.  ಬಿಷಪ್ ಧರ್ಮರಾಜ್ ರಸಾಲಂ ಅವರು ಕಾಂಗ್ರೆಗೇನಲ್ ಕಾನ್ಫರೆನ್ಸ್‍ನಲ್ಲಿ ಭಾಗವಹಿಸಲು ಲ್ಯಾಂಬೆತ್ ಯುಕೆಗೆ ತೆರಳಲಿದ್ದಾರೆ. ನಾಳೆ ಆರಂಭವಾಗಬೇಕಿದ್ದ ಸಮ್ಮೇಳನದ ದಿನಾಂಕವನ್ನು ಬದಲಾಯಿಸಲಾಗಿದೆ ಎಂದು ಪಾಸ್ಟರ್ ಬೋರ್ಡ್ ಕಾರ್ಯದರ್ಶಿ ಫಾ.ಜಯರಾಜ್ ಪ್ರತಿಕ್ರಿಯಿಸಿದ್ದಾರೆ. ದೂರನ್ನು ಕಪೆÇೀಲಕಲ್ಪಿತ ಎಂದು ಜಾರಿ ತಂಡಕ್ಕೆ ಮನವರಿಕೆ ಮಾಡಿಕೊಡಲು ಸಾಧ್ಯವಾಯಿತು ಎಂದರು.
             ಕರಕೋಣಂ ವೈದ್ಯಕೀಯ ಕಾಲೇಜಿನಿಂದ ಲಂಚ ಪಡೆದ ಪ್ರಕರಣಗಳು ಮತ್ತು ವಿದೇಶಿ ವಿನಿಮಯ ನಿಯಮಗಳನ್ನು ಉಲ್ಲಂಘಿಸಿ ಅಕ್ರಮ ಹಣ ವರ್ಗಾವಣೆ ಪ್ರಕರಣಗಳ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ. ತಪಾಸಣೆಗೆ ಸಂಬಂಧಿಸಿದಂತೆ ಇಡಿ ಬಿಷಪ್ ಅವರನ್ನು ವಿಚಾರಣೆ ನಡೆಸಿತ್ತು. ಚರ್ಚ್ ಕಾನ್ಫರೆನ್ಸ್‍ನಲ್ಲಿ ಪಾಲ್ಗೊಳ್ಳಲು ಬಿಷಪ್ ನಿನ್ನೆ  ಯುಕೆಗೆ ತೆರಳಲಿರುವಾಗ ಇಡಿ ಅನಿರೀಕ್ಷಿತ ನಡೆ ಸಂಭವಿಸಿದೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries