ಪೆರ್ಲ: ಶೇಣಿ ಶ್ರೀಶಾರದಾಂಬ ಎಯುಪಿ ಶಾಲಾ ರಕ್ಷಕ ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆ ನಡೆಯಿತು. ಪಿಟಿಎ ಅಧ್ಯಕ್ಷ ವಿನ್ಸೆಂಟ್ ಡಿಸೋಜ ಸಭೆಯ ಅಧ್ಯಕ್ಷತೆವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯ ರಾಧಾಕೃಷ್ಣ ನಾಯಕ್ ಶೇಣಿ, ಪುತ್ತಿಗೆ ಪಂ.ಸದಸ್ಯ ಕೇಶವ, ಮಾತೃಸಂಘದ ಅಧ್ಯಕ್ಷೆ ಶಶಿಪ್ರಭಾ, ಹಿರಿಯ ಶಿಕ್ಷಕಿ ಹೈಮಾವತಿ, ಸ್ಟಾಫ್ ಸೆಕ್ರೆಟರಿ ಸುರೇಖಾ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಸೀಸ್ ಕಂದಲ್ ಅಧ್ಯಕ್ಷ,ಮಾಲತಿ ಉಪಾಧ್ಯಕ್ಷೆ, sಸೌಮ್ಯಲತಾ, ಲಿಲ್ಲಿಕುಟ್ಟಿ, ಸೂರ್ಯನಾರಾಯಣ, ಹರಿಣಾಕ್ಷಿ, ಸೀನ, ವಿನಯ ಅವರನ್ನು ಸದಸ್ಯರಾಗಿ ಹಾಗೂ ಮಾತೃ ಸಂಘದ ಅಧ್ಯಕ್ಷೆಯಾಗಿ ಶಶಿಪ್ರಭಾ ಪುನರಾಯ್ಕೆಗೊಂಡರು.ಶ್ರೀಧರ್ ನಾಯಕ್ ಕುಕ್ಕಿಲ ಕಾರ್ಯಕ್ರಮ ನಿರೂಪಿಸಿದರು.
ಶೇಣಿ ಯುಪಿ ಶಾಲಾ ರಕ್ಷಕ ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆ
0
July 30, 2022