HEALTH TIPS

ಗತಿಮೀರಿ ಹರಿದ ಕೋಡೋಬೆಳ್ಳೂರು ಪರಿಸರ ಸ್ಥಳಗಳಿಗೆ ಎಡಿಎಂ ಸಹಿತ ತಂಡ ಭೇಟಿ: ತುರ್ತು ಕ್ರಮಗಳಿಗೆ ಸೂಚನೆ

               ಕಾಸರಗೋಡು: ಕೋಡೋಂ ಬೆಳ್ಳೂರು  ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗತಿಮೀರಿ ಹರಿದ ಒಡೆಯಂಚಾಲ್ ಬೆಟ್ಟ ಮತ್ತು ಪಾರಕ್ಕಲ್ ತೋಡಿಗೆ ಎಡಿಎಂ ಎ.ಕೆ ರಾಮೇಂದ್ರನ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ತೋಡು ಮತ್ತು ಬೆಳೆ ನಾಶವಾದ ಪ್ರದೇಶಗಳಿಗೂ ತಂಡ ಭೇಟಿ ನೀಡಿತು. ತಕ್ಷಣಕ್ಕೆ ಗತಿ ಮೀರಿ ಹರಿದ ನೀರನ್ನು ತೋಡಿಗೇ ಮರಳಿಸಲು ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಯಿತು. ಸಣ್ಣ ನೀರಾವರಿ ಮತ್ತು ಕೃಷಿ ಇಲಾಖೆಗಳಿಗೆ ಸಂಬಂಧಿಸಿದಂತೆ ರೈತರಿಗೆ ಪರಿಹಾರ ನೀಡಲು ಸೂಚನೆ ನೀಡಲಾಗುವುದು. ಆದಷ್ಟು ಬೇಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರ ಸಭೆ ಕರೆಯಲಾಗುವುದು ಎಂದು ಎಡಿಎಂ ತಿಳಿಸಿದರು.


 

               ಕೋಡೋ ಬೆಳ್ಳೂರು ಪಂಚಾಯಿತಿ ಅಧ್ಯಕ್ಷೆ ಪಿ.ಶ್ರೀಜಾ, ಉಪಾಧ್ಯಕ್ಷ ಪಿ.ದಾಮೋದರನ್, ಪರಪ್ಪ ಬ್ಲಾಕ್ ಪಂಚಾಯಿತಿ ಅಭಿವೃದ್ಧಿ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ರಜನಿ ಕೃಷ್ಣನ್, ವಾರ್ಡ್ ಸದಸ್ಯ ಪಿ.ಗೋಪಿ, ರೈತರಾದ ಬಿ.ಕೆ.ಸುರೇಶ್, ವಿಶ್ವಂಭರನ್, ಥಾಮಸ್ ಕುರಿಶಿಂಗಲ್ ಹಾಗೂ ಸ್ಥಳೀಯರು ಜತೆಗಿದ್ದರು. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಪಾಯ ವಿಶ್ಲೇಷಕ ಪ್ರೇಮ್ ಜಿ. ಪ್ರಕಾಶ್ ಕೂಡ ಎಡಿಎಂ ಜೊತೆಗಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries