HEALTH TIPS

ಸಚಿವ ಆಂಟೋನಿ ರಾಜು ಅವರ ವಿರುದ್ದ ಮಾದಕ ದ್ರವ್ಯ ಪೋರ್ಜರಿ ಪ್ರಕರಣ; ವಿಚಾರಣೆಯನ್ನು ತ್ವರಿತಗೊಳಿಸಬೇಕೆಂದು ಹೈಕೋರ್ಟ್‍ನಲ್ಲಿ ಅರ್ಜಿ

                  ಎರ್ನಾಕುಳಂ: ಪೋರ್ಜರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರಿಗೆ ಸಚಿವ ಆಂಟನಿ ರಾಜು ವಿರುದ್ಧ ಹೈಕೋರ್ಟ್‍ನಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿದೆ. ಜಾರ್ಜ್ ವಟುಕುಳಂ ಎಂಬ ಸಾರ್ವಜನಿಕ ಕಾರ್ಯಕರ್ತ  ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ತ್ವರಿತಗೊಳಿಸಬೇಕು ಎಂಬುದು ಮನವಿಯಲ್ಲಿನ ಆಗ್ರಹವಾಗಿದೆ.

                     ವಿದೇಶಿ ಮಾದಕ ದ್ರವ್ಯ ಪ್ರಕರಣದ ಆರೋಪಿಗಳನ್ನು ರಕ್ಷಿಸಲು ಆಂಟನಿ ರಾಜು ಅವರು ಎಲ್ಲಾ ಸಾಕ್ಷಿಗಳನ್ನೂ ಹಾಳು ಮಾಡಿದ್ದು ಪ್ರಕರಣ. ಈ ಪ್ರಕರಣವು ನೆಡುಮಂಗಾಡ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಆದರೆ ವಿಚಾರಣೆ ಆರಂಭಗೊಳ್ಳದೆ, ಪ್ರಕರಣವು ಧೂಳು ಹಿಡಿಯುತ್ತಿದೆ. ಈ ಸಂದರ್ಭದಲ್ಲೇ ಸಾರ್ವಜನಿಕ ಕಾರ್ಯಕರ್ತ ಅರ್ಜಿ ಸಲ್ಲಿಸಿ ಪ್ರಕ್ರಿಯೆ ತ್ವರಿತಗೊಳಿಸಬೇಕು ಎಂದು ಆಗ್ರಹಿಸಿದರು. ನ್ಯಾಯಾಲಯ ಗುರುವಾರ ಅರ್ಜಿಯ ವಿಚಾರಣೆ ನಡೆಸಲಿದೆ.

                   ಅರ್ಜಿಯ ಪ್ರಕಾರ, ಆಂಟೋನಿ ರಾಜು ವಿರುದ್ಧದ ಪ್ರಕರಣವು ದಶಕಗಳಿಂದ ನ್ಯಾಯಾಲಯದ ಕೊಠಡಿಯಲ್ಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗುತ್ತಿದೆ. ಹಾಗಾಗಿ ನ್ಯಾಯಾಲಯ ಮಧ್ಯಪ್ರವೇಶಿಸಿ ವಿಚಾರಣೆಯನ್ನು ಚುರುಕುಗೊಳಿಸಬೇಕು. ತನಿಖೆ ಸೇರಿದಂತೆ ಪ್ರಕ್ರಿಯೆ ಮುಗಿದ ನಂತರ ಆದಷ್ಟು ಬೇಗ ಪ್ರಕರಣದ ನಿರ್ಧಾರ ಕೈಗೊಳ್ಳಬೇಕು. ನ್ಯಾಯಾಲಯದ ತನಿಖೆಯೂ ಆಗಬೇಕು. ಈ ಅರ್ಜಿಯಲ್ಲಿ ಹೈಕೋರ್ಟ್ ಮಧ್ಯಪ್ರವೇಶಿಸುವಂತೆಯೂ ಮನವಿ ಮಾಡಲಾಗಿದೆ.

                 ಆಂಟೋನಿ ರಾಜು ಜ್ಯೂನಿಯರ್ ವಕೀಲರಾಗಿ ಅಭ್ಯಾಸ ಮಾಡುತ್ತಿದ್ದಾಗ ನಡೆದ ಘಟನೆಯನ್ನು ಆಧರಿಸಿದ ಪ್ರಕರಣ. ಆರೋಪಿಯನ್ನು ರಕ್ಷಿಸಲು ನ್ಯಾಯಾಲಯದ ಗುಮಾಸ್ತರ ಮೇಲೆ ಪ್ರಭಾವ ಬೀರಿ ದಾಖಲೆ ಕದ್ದು ಪ್ರಮಾಣ ಬದಲಾವಣೆ ಮಾಡಿಸಿದ್ದು ಪ್ರಕರಣ. ಒಳಉಡುಪಿನಲ್ಲಿ ಮಾದಕ ವಸ್ತು ಬಚ್ಚಿಟ್ಟ ಪ್ರಕರಣದಲ್ಲಿ ಆರೋಪಿಗೆ ಒಳಉಡುಪು ಹೊಂದಿಕೆಯಾಗುವುದಿಲ್ಲ ಎಂದು ನ್ಯಾಯಾಲಯ ಕಂಡುಹಿಡಿದು ಖುಲಾಸೆಗೊಳಿಸಿತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries