HEALTH TIPS

ಇಂದಿನಿಂದ ರಾಮಾಯಣ ಮಾಸಾಚರಣೆ

                 ಬದಿಯಡ್ಕ  : ಕರ್ಕಾಟಕ ಮಾಸದ ಒಂದು ತಿಂಗಳ ಕಾಲಾವಧಿಯಲ್ಲಿ ಕೇರಳಾದ್ಯಂತ ರಾಮಾಯಣ ಮಾಸಾಚರಣೆ ನಡೆದು ಬರಲಿದೆ. ಮನೆ, ದೇವಾಲಯ, ಮಂದಿರಗಳಲ್ಲಿ ರಾಮಾಯಣ ಪಾರಾಯಣ ಸಾಂಪ್ರದಾಯಿಕ ಶ್ರದ್ದೆಯಿಂದ ನಡೆಯುತ್ತಿದೆ. ಈ ಒಂದು ತಿಂಗಳ ಕಾಲಾವಧಿಯನ್ನು ರಾಮಾಯಣ ಮಾಸವೆಂದೂ ಕರೆಯಲಾಗುತ್ತದೆ. ನಾಡಿನ ದುರಿತ ನಿವಾರಣೆ ನಡೆಸುವುದೆಂಬ ನಂಬಿಕೆಯ ಆಟಿ ಕಳಂಜನ ಮನೆ ಸಂಚಾರವೂ ಈ ಕಾಲಾವಧಿಯಲ್ಲಿ ನಡೆದುಬರುತ್ತಿರುವುದು ವಾಡಿಕೆಯಾಗಿದೆ.


           ಬದಿಯಡ್ಕ ಸಮೀಪದ ಕೆಡೆಂಜಿ ಶ್ರೀಮಹಾವಿಷ್ಣು ದೇವಾಲಯದಲ್ಲೂ ವರ್ಷಂಪ್ರತಿ ರಾಮಾಯಣ ಮಾಸಾಚರಣೆ ನಡೆಯುತ್ತಿದ್ದು, ಈ ವರ್ಷದ ಕಾರ್ಯಕ್ರಮ ನಿನ್ನೆ ಆರಂಭಗೊಂಡಿತು. ವಾಚಕರಾಗಿ ರವಿಕಾಂತ ಕೇಸರಿ ಕಡಾರು ಹಾಗೂ ಪ್ರವಚನಕಾರರಾಗಿ ಶ್ಯಾಮ ಆಳ್ವ ಕಾರ್ಯಕ್ರಮ ನಡೆಸಿಕೊಡುತ್ತಿದ್ದು, ನಿನ್ನೆ ರಾಮಾಯಣಾಂತರ್ಗತ ಬಾಲಕಾಂಡದ ಆಯ್ದ ಭಾಗಗಳ ವಾಚನ-ಪ್ರವಚನ ನಡೆಯಿತು. ಇಂದು ಯಾಗ ಸಂರಕ್ಷಣೆಯ ಕಥಾಭಾಗದ ವಾಚನ ಪ್ರವಚನ ನಡೆಯಲಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries