ಮುಂಬೈ: ದುಬೈನಿಂದ ಕೊಚ್ಚಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನ ತಾಂತ್ರಿಕ ದೋಷದಿಂದ ಮಾರ್ಗ ಬದಲಿಸಿ ಇಳಿಸಲಾಗಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಯಿತು. ಎಐ 934 ವಿಮಾನ ಮುಂಬೈಗೆ ಬಂದಿಳಿಯಿತು. ಘಟನೆ ಕುರಿತು ಡಿಜಿಸಿಐ ತನಿಖೆ ಆರಂಭಿಸಿದೆ. ಪ್ರಾಥಮಿಕ ತನಿಖೆಗೆ ಇಬ್ಬರು ಹಿರಿಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಕಳೆದ ವಾರ ಶಾರ್ಜಾದಿಂದ ಬರುತ್ತಿದ್ದ ಹೈದರಾಬಾದ್ ವಿಮಾನ ತುರ್ತು ಭೂಸ್ಪರ್ಶ ಮಾಡಿತ್ತು. ವಿಮಾನವು ಪಾಕಿಸ್ತಾನದ ಕರಾಚಿಯಲ್ಲಿ ಇಳಿಯಿತು. ಈ ಹಿಂದೆಯೂ ಸ್ಪೈಸ್ ಜೆಟ್ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಇಂತಹ ಸಮಸ್ಯೆಗಳಿಂದ ಎರಡು ವಾರಗಳಲ್ಲಿ ಎರಡು ವಿಮಾನಗಳು ಕರಾಚಿಯಲ್ಲಿ ಲ್ಯಾಂಡ್ ಆಗಿದ್ದವು.
ಅಲ್ಪಾವಧಿಯಲ್ಲಿಯೇ ಅನೇಕ ರೀತಿಯ ಘಟನೆಗಳು ವರದಿಯಾದ ನಂತರ, ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಸಭೆಯನ್ನು ಕರೆದು ಡಿಜಿಸಿಎ ಅಧಿಕಾರಿಗಳೊಂದಿಗೆ ವಿವರವಾಗಿ ಚರ್ಚಿಸಿದರು. ವಿಮಾನ ಸುರಕ್ಷತೆ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ವಿಮಾನಯಾನ ಸಚಿವರು ಸಲಹೆ ನೀಡಿದ್ದಾರೆ.