ನವದೆಹಲಿ: ಸದ್ಯ ದೇಶದಲ್ಲಿ ರಸ್ತೆಗಳ ಅಭಿವೃದ್ಧಿ ಕ್ಷಿಪ್ರಗತಿಯಲ್ಲಿ ಸಾಗುತ್ತಿವೆ. ಹಿಂದೆಂದೂ ಕಾಣದ ರಸ್ತೆಗಳನ್ನು ಇಂದು ಕಾಣುತ್ತಿದ್ದೇವೆ. ಇದೀಗ ತಮ್ಮ ಟ್ವಿಟ್ಟರ್ನಲ್ಲಿ ಸಾರಿಗೆ ಸಚಿವರು ಹಂಚಿಕೊಂಡಿರುವ ಈ ರಸ್ತೆ ವಿದೇಶದಲ್ಲ, ಬದಲಾಗಿ ನಮ್ಮ ರಾಜ್ಯದ್ದೇ ಎನ್ನುವುದು ಇನ್ನೇನು ವಿಶೇಷ.
ನವದೆಹಲಿ: ಸದ್ಯ ದೇಶದಲ್ಲಿ ರಸ್ತೆಗಳ ಅಭಿವೃದ್ಧಿ ಕ್ಷಿಪ್ರಗತಿಯಲ್ಲಿ ಸಾಗುತ್ತಿವೆ. ಹಿಂದೆಂದೂ ಕಾಣದ ರಸ್ತೆಗಳನ್ನು ಇಂದು ಕಾಣುತ್ತಿದ್ದೇವೆ. ಇದೀಗ ತಮ್ಮ ಟ್ವಿಟ್ಟರ್ನಲ್ಲಿ ಸಾರಿಗೆ ಸಚಿವರು ಹಂಚಿಕೊಂಡಿರುವ ಈ ರಸ್ತೆ ವಿದೇಶದಲ್ಲ, ಬದಲಾಗಿ ನಮ್ಮ ರಾಜ್ಯದ್ದೇ ಎನ್ನುವುದು ಇನ್ನೇನು ವಿಶೇಷ.
ನಾಲ್ಕು ಹಾಗೂ ಆರು ಪಥದ ಹುನಗುಂದ ಹಾಗೂ ಹೊಸಪೇಟೆ ಮಾರ್ಗದಲ್ಲಿ ನಿರ್ಮಾಣವಾಗಿರುವ ವಿಶೇಷವಾಗಿ ಬೆಟ್ಟದಲ್ಲೇ ಸುರಂಗ ಕೊರೆದು ಪರಿಸರಕ್ಕೆ ಹಾನಿಯಾಗದೇ ನಿರ್ಮಿಸಲಾಗಿರುವ ಈ ರಸ್ತೆಯ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ನೋಡಲು ವಿದೇಶಿ ರಸ್ತೆಯಂತೆ ಕಾಣುವ ಈ ಹೆದ್ದಾರಿ ಭಾರೀ ಆಕರ್ಷಕವಾಗಿದೆ. ಇನ್ನು ಈ ರಸ್ತೆ ಕೇರಳ ಮತ್ತು ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಕೊಂಡಿಯಾಗಿದೆ. ಇದು 97ಕಿಮೀ ಉದ್ದವಿದ್ದು, ಬರೋಬ್ಬರಿ 946ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿದೆ.
ಈ ಹೆದ್ದಾರಿಯು ಕರಡಿಧಾಮಕ್ಕೆ ಸಂಪರ್ಕ ಒದಗಿಸುವುದರಿಂದ ಅದಕ್ಕನುಗುಣವಾಗಿ ಈ ಸುರಂಗ ಮಾರ್ಗವನ್ನು ನಿರ್ಮಿಸಲಾಗಿದ್ದು, ಸದ್ಯ ಪ್ರಕೃತಿ ಮತ್ತು ವನ್ಯಜೀವಿ ಪ್ರಿಯರಿಗೆ ಈ ಎಕ್ಸ್ಪ್ರೆಸ್ ವೇ ಸ್ವರ್ಗವಾಗಿದೆ ಎಂದು ಬಣ್ಣಿಸಿದ್ದಾರೆ.ಹುನಗುಂದ-ಹೊಸಪೇಟೆ ಎಕ್ಸ್ಪ್ರೆಸ್ ವೇ ವಿಶ್ವದರ್ಜೆಯ ಮೂಲಸೌಕರ್ಯವನ್ನು ಹೊಂದಿದೆ. ಕರ್ನಾಟಕದ ಹುನಗುಂದ,ಇಳಕಲ್,ಕುಷ್ಟಗಿ, ಹಿಟ್ನಾಳ್,ಹುಲಗಿ ಮತ್ತು ಹೊಸಪೇಟೆಯನ್ನು ಸಂಪರ್ಕಿಸುತ್ತದೆ.