ಕಾಸರಗೋಡು: ವಿಜ್ಞಾನದಿಂದ ನಮ್ಮ ಜೀವನದಲ್ಲಿ ಜ್ಞಾನ, ಹೊಸ ಲೋಕದ ನೂತನ ಜ್ಞಾನ ವಿಷಯಗಳ ಅನ್ವೇಷಣೆ, ಅರಿವು, ತನ್ಮೂಲಕ ಜೀವನ ವಿಕಾಸ ಉಂಟಾಗುತ್ತದೆ. ಇಂದು ನಾವು ಅನುಭವಿಸುತ್ತಿರುವ ಪ್ರತಿಯೊಂದು ವಿಕಾಸವೂ ವಿಜ್ಞಾನ ಅನ್ವೇಷಣೆಯ ತಳಹದಿಯ ಮೇಲೆ ರೂಪುಗೊಂಡಿದೆ ಎಂದು ನಿವೃತ್ತ ವಿಜ್ಞಾನ ಶಿಕ್ಷಕಿ, ಕನ್ನಡ ಭವನದ ಸಂಧ್ಯಾರಾಣಿ ಟೀಚರ್ ತಿಳೀಸಿದರು.
ಕಾಸರಗೋಡು ಮೆಡೊನ್ನ ಎಯುಪಿ ಶಾಲೆಯಲ್ಲಿ ವಿಜ್ಞಾನ ಕ್ಲಬ್ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. .
ಶಿಲಾಯುಗದ ಮನುಷ್ಯನಿಂದ ಆಧುನಿಕ ಜೀವಿತ ಶೈಲಿಗೆ ಬದಲಾಗಿಕೊಂಡಿರುವ ಜೀವನ ಸುಖ-ಸೌಕರ್ಯಗಳಿಗೆ ಭಾಜನರಾದ ನಾವು ಸಾವಿರಾರು ಮಂದಿ ವಿಜ್ಞಾನಿಗಳ ಅವಿಶ್ರಾಂತ ಪರಿಣಿತ ಫಲದಂದಲೇ ಆಗಿದೆ. ವಿಜ್ಞಾನದಿಂದ ಅಜ್ಞಾನ ತೊಲಗಿ ಹೊಸ ಬೆಳಕು ಮೂಡುತ್ತದೆ ಎಂದು ಅವರು ಈ ಸಂದರ್ಭ ತಿಳಿಸಿದರು.
ಮುಖ್ಯೋಪಾಧ್ಯಾಯಿನಿ ಲೀನಾ ರೋಸ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಪ್ರಶಸ್ತಿ ವಿಜೇತ ಶಿಕ್ಷಕ ನಿರ್ಮಲ್ ಕುಮಾರ್ ಕಾರಡ್ಕ ವಿಜ್ಞಾನ ಕ್ಲಬ್ ಉದ್ಘಾಟಿಸಿದರು. ಸಂಧ್ಯಾ ಡಿಸೋಜ ಸ್ವಾಗತಿಇಸ, ಸೌಮ್ಯಾ ಎಂ.ತೋಮಸ್ ವಂದಿಸಿದರು. ನೌಕರ ಸಂಘದ ಕಾರ್ಯದರ್ಶಿ ಬಿಜಿ ಜಾಕೋಬ್ ನಿರ್ವಹಿಸಿದರು.
ಮೆಡೋನಾ ಶಾಲೆಯಲ್ಲಿ ವಿಜ್ಞಾನ ಕ್ಲಬ್ ಉದ್ಘಾಟನೆ: ಇಂದಿನ ಸೌಕರ್ಯಗಳು ಸಾವಿರಾರು ವಿಜ್ಞಾನಿಗಳ ಅವಿಶ್ರಾಂತ ಶ್ರಮ: ಸಂಧ್ಯಾರಾಣಿ ಟೀಚರ್ ಅಭಿಮತ
0
July 28, 2022
Tags