ಮಂಜೇಶ್ವರ : ದೇವಂದಪಡ್ಪಿನ ಶ್ರೀಮಹಾವಿಷ್ಣು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ವಲಯ ಮಟ್ಟದ ಸಮಿತಿ ರೂಪಿಕರಣ ಪಾವೂರು ಮುಡಿಮಾರ್ ಶ್ರೀ ಮಲರಾಯ ಗುಳಿಗ ಕ್ಷೇತ್ರದಲ್ಲಿ ನಡೆಯಿತು. ಸಭೆಯಲ್ಲಿ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮೋಹನ್ ದಾಸ್ ಶೆಟ್ಟಿ ನೆತ್ತಿಲ, ಸಮಿತಿಯ ಸಂಘಟನಾ ಕಾರ್ಯದರ್ಶಿ ಪ್ರೇಮಾನಂದ ರೈ ನೆತ್ತಿಲ, ಮಲರಾಯ ಕ್ಷೇತ್ರದ ಪ್ರಧಾನ ಅರ್ಚಕ ಚಂದ್ರಹಾಸ ಪೂಜಾರಿ ಮುಡಿಮಾರ್, ಅರಿಬೈಲು ಬರುವ ಧೂಮಾವತಿ ದೈವದ ಪಾತ್ರಿ ಅರಸ ಪೂಜಾರಿ, ಬ್ರಹ್ಮ ಶ್ರೀ ನಾರಾಯಣ ಗುರು ಯುವ ವೇದಿಕೆ ಮುಡಿಮಾರ್ ಇದರ ಅಧ್ಯಕ್ಷ ರವಿ ಮುಡಿಮಾರ್, ಜೀರ್ಣೋದ್ಧಾರ ಸಮಿತಿಯ ಸಹ ಕೋಶಾಧಿಕಾರಿ ಮಾಧವ ಪೂಜಾರಿ ಕುದುಕೋರಿ, ಶ್ಯಾಂಬ ನಾಯ್ಗ ಕೆದುಂಬಾಡಿ, ಭಾಸ್ಕರ್ ಶೆಟ್ಟಿ ಕೆದುಂಬಾಡಿ, ನಾರಾಯಣ ಪೂಜಾರಿ ಮುಡಿಮಾರ್ ಮೊದಲಾದವರು ಉಪಸ್ಥಿತರಿದ್ದರು. ಮುಡಿಮಾರ್ ವಲಯ ಮಟ್ಟದ ಪ್ರಧಾನ ಸಂಚಾಲಕರಾಗಿ ನವೀನ ಮುಡಿಮಾರ್, ಸಹ ಸಂಚಾಲಕರಾಗಿ ನವೀರಾಜ್ ಮುಡಿಮಾರ್, ಪ್ರಕಾಶ್ ಕುಮಾರ್ ಮುಡಿಮಾರ್, ನಾಗೇಶ್ ಬಳ್ಳೂರು, ಜಯಪ್ರಕಾಶ್ ಅಡ್ಯಂತಾಯ ಕಾಪು, ಉಮೇಶ್ ಮುಡಿಮಾರ್, ಸುರೇಶ್ ಮುಡಿಮಾರ್, ಜೀವನ್ ಮುಡಿಮಾರ್, ದೇವದಾಸ್ ಮುಡಿಮಾರ್, ಆಯ್ಕೆಯಾಗಿದ್ದಾರೆ. ಅಲ್ಲದೆ, ಹತ್ತು ಸದಸ್ಯರನ್ನು ನೇಮಕ ಮಾಡಲಾಯಿತು. ರವಿ ಮುಡಿಮಾರ್ ಸ್ವಾಗತಿಸಿ, ಮಾಧವ ಪೂಜಾರಿ ವಂದಿಸಿದರು.
ದೇವಂದಪಡ್ಪು: ಜೀರ್ಣೋದ್ದಾರ ಸಮಿತಿ ಸಭೆ
0
July 28, 2022